ನಮಸ್ಕಾರ ಎಲ್ಲರಿಗೂ,
ನನಗೆ ಕೆಲದಿನಗಳ ಹಿಂದೆ ’ಏನು ಮಾಡಬಹುದು?’ ಮತ್ತು ’ಹೀಗೆ ಶುರು ಮಾಡೋಣವೆ?’ ಪೋಸ್ಟುಗಳಿಗೆ ಬಹಳ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರಕಿತು. ಸರಿ ಏನಾದರು ಆಗಲಿ ಒಂದೆಡೆ ಭೇಟಿಯಾಗಿ ಈ ಬಗ್ಗೆ ಚರ್ಚೆ ಮಾಡಲೆಬೇಕೆಂಬ ಹುಮ್ಮಸ್ಸು ಹೊತ್ತು ಪ್ಲಾನು ಮಾಡುತ್ತಿರುವಾಗ ಶ್ರೀಯುತ ವೆಂಕಟೇಶರೆಂಬ ಮಹಾನುಭಾವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ನಮ್ಮ ಅಭಿಪ್ರಾಯಗಳನ್ನು ನಾವು ವ್ಯಕ್ತಪ ಡಿಸಿದರೆ ವೆಂಕಟೇಶರು ನಾವು ನಿರೀಕ್ಷಿಸಿರದ ಮಟ್ಟದ ವಿಕೃತಮನೋಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಿ ತಾವು ಎಂಥವರೆಂದು ಪ್ರಪಂಚಕ್ಕೇ ಸಾರುವ ಹುಂಬತನವನ್ನು ತೋರಿದ್ದಾರೆ. ಈ ಮನುಷ್ಯನ ಐಡಿ ವೆಬ್ ದುನಿಯಾದ್ದಾಗಿದ್ದರು ಸ್ನೇಹಿತ ತವಿಶ್ರೀಯವರು ವೆಬ್ ದುನಿಯಾವನ್ನು ಸಂಪರ್ಕಿಸಿದಾಗ ಅವರು ತಮ್ಮಲ್ಲಿಈ ಹೆಸರಿನ ಯಾವ ವ್ಯಕ್ತಿ ಇಲ್ಲವೆಂದೂ, ಈ ಐಡಿಯನ್ನು ವೆಬ್ ದುನಿಯಾ ಉಪಯೋಗಿಸುವವರಿಗೆ ನೀಡಲಾಗುವುದರಿಂದ ಇದು ಬೇರಾರೋ ಇರಬೇಕೇಂಬ ಸಮಜಾಯಿಶಿಯನ್ನು ನೀಡಿದರು. ಇದಲ್ಲದೆ ಅಚ್ಚರಿಹುಟ್ಟಿಸುವ ವಿಚಾರವೆಂದರೆ ಗೆಳತಿ ಚೇತನಾಳ ಬಗ್ಗೆ ಏಕವಚನ ಬಳಸಿ ಹೊಲಸಾಗಿ ಬರೆದಿರುವ ಬರೆದಿರುವ ಇದೇ ಮನುಷ್ಯ ಚೇತನಾ ಹಾಗು ಸುಪ್ರೀತರು ಸಹಲೇಖಕರಾಗಿರುವ ಓಶೋ ಬಗೆಗಿನ ಬ್ಲಾಗ್ ಆದ www.hakkihadu.blogspot ನ ಸಹಲೇಖಕನಾಗಿರುವುದು. ಎಲ್ಲಿ ಓಶೋ, ಎಲ್ಲಿ ವೆಂಕಟೇಶ್?
ಯಾಕೆ ವೆಂಕಟೇಶ್, ನಿಮಗೆ ನಿಮ್ಮ ಸಹಲೇಖಕಿಯ ಬಗ್ಗೆ ತಿಳಿದಿಲ್ಲವೆ? ಈ ಕೆಳಗಿನ ಮಾತುಗಳು ಉದ್ದೇಶಪೂರ್ಣವೆ ಅಥವ ಈ ವಿಕೃತಬುದ್ಧಿ ನಿಮ್ಮ ಸ್ಪ್ಲಿಟ್ ಪರ್ಸನಾಲಿಟಿಯ ಕಡೆಗೆ ಬೆರಳು ಮಾಡುತ್ತದೆಯೆ? ಈ ಕೆಳಗಿನ ಕಮೆಂಟುಗಳನ್ನು ಪ್ರಕಟಿಸುತ್ತಿರುವ ಒಂದೇ ಉದ್ದೇಶ - Mr. Venkatesh - whoever-you -are, I will not give you the pleasure of relishing your words. I give them back to you. Eat them and be content with your MCP attitude. I warn you for the first and last time that If I see another mail from you on my blog, I will lodge a complaint against you, what if you are in Haryana or Alaska. I know very well that people like you are sick and need counseling. Therefore this warning. Mind your language before saying anything about a person, especially a woman. I can understand why you could not stand my blog post. ನನಗೆ ಟೈಟಲ್ಲುಗಳ ನೀಡಲು, ನನ್ನ ಸ್ನೇಹಿತೆಯ ಬಗ್ಗೆ ಅಸಹ್ಯವಾಗಿ ಮಾತನಾಡಲು ನಿಮಗೆಷ್ಟು ಧೈರ್ಯ?
ಈ ಕೆಳಗೆ ವೆಂಕಟೇಶರ ಮೊನ್ನೆಯ ಕಮೆಂಟು, ಅದರ ನಂತರ ಹಿಂದಿನ ಕಮೆಂಟುಗಳು ಹಾಗೂ ನಮ್ಮ ಉತ್ತರಗಳನ್ನು ನಿಮಗಾಗಿ ನೀಡಿದೇನೆ.
Venkatesh
venkven@webdunia.com | 125.20.36.178
ಮಿಸ್. ಕಿರು’ಚಾಟರ್ ಬಾಕ್ಸ್,
ಪರವಾಗಿಲ್ವೆ ಗೆದ್ದೆನೆಂಬ ತಮ್ಮ ಅಟ್ಟಹಾಸ, ಕುಹಕ ಯಾವುದೇ ಅತ್ಯಾಚಾರಿಗಿಂತ ಕಡಿಮೆಯೇನಿಲ್ಲ……
ತಾವು ಉತ್ತರವಾಗಿ ಬಳಸಿರುವ ಕಲಹ ಕೌಶಲ ಪದಗಳು, ವೈಯುಕ್ತಿಕ ಮಟ್ಟದ ಆರೋಪಗಳನ್ನು ತುಂಬ ಸಲೀಸಾಗಿ ಉಪಯೋಗಿಸಿದ್ದಿರಾ..
ಇದು ಚರ್ಜೆ ಹುಟ್ಟು ಹಾಕುವವರ ಸ್ಥಿಮಿತ, ಹಾಗು ಲಕ್ಷಣವಂತೂ ಅಲ್ಲ. ಒಬ್ಬರ ತೇಜೋವಧೆಗೆ ಯಾವುದೇ ಮಟ್ಟಕ್ಕೆ ಹೋಗಬಲ್ಲಿರೆಂದು ಕಾಣಿಸುತ್ತದೆ.
ಇನ್ನು ಅಸಮಾನತೆ, ಅತ್ಯಾಚಾರ ಇವುಗೆಳೆಲ್ಲದರ ದುಷ್ಪರಿಣಾಮ ಸಮಾಜದ ಎಲ್ಲರೂ ಅನುಭವಿಸುತ್ತಿರುತ್ತಾರೆ. ರೀತಿ ಬೇರೆಯಿರಬಹುದು. ತನ್ನ ಮಾನಸಿಕ ಕಹಿಯನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ಮಕ್ಕಳ ತಫ್ಫಿನಲ್ಲೂ ಭವಿಶ್ಯದ ಪೀಡಕನಂತೆ ಭಾವಿಸಿಕೊಂಡು ಅವರ ಮೇಲೆ ಎರಗುವ, ಪರಚುವ ನಿಮ್ಮಂತ ಮನೋವಿಕಾರಿ ಮಾನಿನಿಯರನ್ನು ಹುಡುಗರು ಅನುಭವಿಸಿರುತ್ತಾರೆ. ಬಾಲ್ಯದಲ್ಲಿ ಅದು ಉಂಟುಮಾದುವ ಆಘಾತಗಳು ಕಡಿಮೆಯೇನಲ್ಲ.
ಹಾಗೆ ಇಲ್ಲಿ ಬಹಳ ಉರಿ ಬಿದ್ದಿರುವುದು ಸಂಸ್ಕ್ರತಿ ವಿಷಯದಲ್ಲಿ, ದೇಶದ ಪ್ರತಿಯೊಬ್ಬರಿಗೂ ಅದರ ಸಂಸ್ಕ್ರತಿಯನ್ನು ಟೀಕಿಸುವ, ಅಭಿಪ್ರಾಯ ಹೊಂದುವ ಅದಿಕಾರವಿದ್ದೆ ಇದೆ. ನಾವು ನಮ್ಮದಲ್ಲದೇ ಬೇರೆ ದೇಶದ ಸಂಸ್ಕ್ರತಿಯನ್ನು ಟೀಕಿಸಲು ಬರುವುದಿಲ್ಲ. ತಮ್ಮ ಮನೆಯ, ಜನಾಂಗದ ಆಚರಣೆಗಳನ್ನೆ ದೇಶದ ಸಂಸ್ಕ್ರತಿಯನ್ನಾಗಿ ಬಿಂಬಿಸಲು, ಪ್ರಚಾರ ಮಾಡ ಹೊರಟವರಿಗೆ ಹೀಗೆ ಉರಿ ಬೀಳುವುದು ಸಹಜ. ತಮ್ಮ ಲೇಖನದಲ್ಲಿ ಎಲ್ಲಾ ಗಂಡಸರೂ ದುರುದ್ದೇಶದಿಂದಲೇ ನೋಡುತ್ತಿದ್ದರು ಎಂದಿದ್ದೀಯೆ ಹಳದಿಯಾಗಿ ನೋಡುವುದು ಅಭ್ಯಾಸ ಆಗಿಬಿಟ್ಟಿರಬೇಕು. ಚರ್ಚೆ ಹುಟ್ಟುಹಾಕುವವರು ಹೀಗೆಲ್ಲಾ ಬಾಯಿಮಾಡಿ, ನೈಲ್ ಪಾಲಿಷ್ ನ ಪಂಜವನ್ನು ತೋರಿಸಿದರೆ ಬಂದವರು ಆಯ್ತು ಮೇಡಮ್ ಯಾವಗಲೂ ಬ್ರಾಂಡೆಡ್ ಖಾರದಪುಡಿಯನ್ನೆ ಉಪಯೋಗಿಸಿ ಎಂದು ಅಚ್ಚ ಅಚ್ಚ ಹೇಳಿ ಹೋಗಬೇಕಾಗುತ್ತದೆ ಇನ್ನು ಚಿಂತನೆ ಖಾರದಪುಡಿಗಿಂತ ಮುಂದೆ ಎಲ್ಲಿ ಹೋಗುತ್ತದೆ.
ಇನ್ನು ಚೇತನಾ, ನಾಲಿಗೆ ಇರುವಷ್ಟು ಹರಿಬಿಟ್ಟಿದ್ದೀಯೇ, ಅಪ್ಪಟ ಗಂಡಸ್ತನದ ಬಗ್ಗೆ ಮಾತಾಡಿದ್ದೀ. ಅವಶ್ಯಕತೆಯಿಲ್ಲದಿದ್ದರೂ.
ನಿನ್ನನ್ನು ನೀನು ಗೂಷ್ಲು ಎಂದು ಕರೆದುಕೊಂಡಿರುವುದು ಸರಿ, ಹೀಗೆ ಹೇಳಿಕೊಂಡಿರುವುದು ತಾವು ತಮ್ಮ ಅಪ್ಪಟ ಹೆಣ್ತನದ ಬೇಲಿ ಹಾರಿರುವ ಮತ್ತು ಹಾರುವ ಕುರುಹು ತವಕ ತೋರಿಸುತ್ತದೆ ಅಂತ ನಾನು ಹೇಳಬೇಕಾಗುತ್ತದೆ.
ಇದನ್ನೆಲ್ಲಾ ಓದಿದ ಮೇಲೆ ಚಾಟರ್ ಬಾಕ್ಸ್ ಮತ್ತೆ ಸಿಡಿಯುತ್ತದೆ ಅದರೆ ತಮ್ಮ ಕಲಹ ಚಾತುರ್ಯವನ್ನ ಬೀದಿನಲ್ಲಿ ಮಟ್ಟಕ್ಕೆ ಕೊಂಡು ಹೋಗುವುದಿಲ್ಲ ಎಂದುಕೊಂಡಿದ್ದೇನೆ.
ಮತ್ತೆ ನೋಡಲು ಹೋಗುವುದಿಲ್ಲ, ಏಕೆಂದರೆ ಎಲ್ಲರೂ ಕಿರುಚಾಟರ್ ಬಾಕ್ಸ್ ಗಳಂತೆಯೇ ಕಾಣುವ ಅಪಾಯವಿದೆ.
Older comments from Venkatesh and our replys
From ಹೀಗೆ ಶುರು ಮಾಡೋಣವೆ?, 2008/04/29 at 6:52 PM
Venkatesh said,
April 3, 2008 @ 06:30 p04 · Edit
ಹುಹ್ ಏನ್ರಿ ಇದು ರೂಲು ದೊಣ್ಣೆ, ಖಾರದ ಪುಡಿ, ಕರಾಟೆ ಎಲ್ಲಾ ಕಲಿಯುವುದು… ಆತ್ಮ ರಕ್ಷಣೆಗಾಗಿ ಇದೆಲ್ಲಾ ಆಗೊ ಹೋಗೊ ಮಾತಾ? ನಮ್ಮದು ಏನು ದರಿದ್ರ ಸಂಸ್ಕ್ರತಿನೋ, ದೇಶಾನೋ? ಇದನ್ನೆಲ್ಲಾ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡವರ ಮನಸ್ಸು ಆರೋಗ್ಯದಿಂದ ಸಮಾಜದ ಕಡೆ ನೋಡುವಂತಾಗಬೇಕಲ್ಲಾ, ಕಣ್ಣಿಗೆ ಕಾಣುವ ಹುಡುಗರೆಲ್ಲಾ , ಗಂಡಸರೆಲ್ಲಾ ಮನುಷ್ಯರಂತೆ ಕಾಣದೆ ರೂಲು ದೊಣ್ಣೆ, ಖಾರದ ಪುಡಿಯಂತೆ ಕಂಡರೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವೇ? ಇಲ್ಲಿ ಸಿಂಧುರವರು ಇದನ್ನೆಲ್ಲಾ ತಿಳಿದು ಓದಿಯೂ ಏನಾದರೂ ಉಪಯುಕ್ತ ಇನಿಶಿಯೇಟಿವ್ ಮಾಡೋಣ ಅಂದಿದ್ದಾರೆ ಹೌದು ಹಾಗೆ ಮಾಡುವುದರ ಮೂಲಕವೇ ಸ್ವಾಸ್ಥ್ಯ ಸಾಧ್ಯ. ಕರಾಟೆಯನ್ನು ಒಂದು ವಿದ್ಯೆ, ಕಲೆ, ಫಿಟ್ ನೆಸ್ ಗಾಗಿ ಕಲಿಯೋದು ಆರೋಗ್ಯಕರವಾದದ್ದು, ಸಣ್ಣ ಹೆಣ್ಣುಮಕ್ಕಳಿಗೆ ನೀನು ಗಂಡು ಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಅಂತ ಕಳಿಸಿದರೆ ಆ ಹುಡುಗಿ ತನ್ನ ಮುಂದಿರುವ ಸಮಾಜದ ಬಗ್ಗೆ ಏನು ಯೋಚಿಸಬೇಕು.
ಒಮ್ಮೆ ತೇಜಸ್ವಿಯವರಿಗೆ ಅವರ ಆರೋಗ್ಯಕರ ಚೇತೋಹಾರಿ ಬರಹದ ಬಗ್ಗೆ ಕೇಳುತ್ತಿದ್ದಾಗ ಅಥವಾ ಅಂಥ ಒಂದು ಸಂಧರ್ಬದಲ್ಲಿ ತೇಜಸ್ವಿಯವರೆಂದರು ಅವರು ವಯಸ್ಕರ ಶಿಕ್ಷಣದ ಪುಸ್ತಕಗಳನ್ನು ನೋಡಿದರಂತೆ ಅದರಲ್ಲಿ ಇದ್ದ ವಿಷಯಗಳು, “ರೇಪ್ ಗೆ ಓಳಗಾದಾಗ ಹೆಣ್ಣು ಏನು ಮಾಡಬೇಕು?” “ಪೋಲಿಸ್ ಕಂಪ್ಲೇಂಟ್, ಕೋರ್ಟ್ ಮೂಲಕ ರಕ್ಷಣೆ, ಇಂತಹ ವಿಷಯಗಳಿದ್ದವಂತೆ, ಸೋ ಅಕ್ಷರಲೋಕಕ್ಕೆ ಕಾಲಿಡುವವರಿಗೆ ಮೊದಲಿಗೆ ಇಂತಹ ಭೀಕರ ಲೋಕದ ಪರಿಚಯದ ಮೂಲಕ ಸ್ವಾಗತ ಮಾಡಹೋದರೆ ಅವರ ಕಲಿಯುವಾಸೆ ಇಂಗಿ ಹೋಗುತ್ತದೆ. ನನಗೆ ತೇಜಸ್ವಿಯವರ ಈ ಹೇಳಿಕೆ ನನಗೆ ಬಹಳ ಮಹತ್ವದೆನಿಸಿತು. ನಾನು ಹಲವು ವರ್ಷಗಳ ಮೊದಲು ನನಗಿರುವಂತೆ ಪುಸ್ತಕ ಓದುವ ಅಭ್ಯಾಸ ನನ್ನ ಅಕ್ಕ, ತಮ್ಮ, ತಂಗಿಯರಿಗೂ ಹತ್ತಿಸಲು ಪ್ರಯತ್ನ ಮಾಡುತ್ತಿದ್ದೆ ಅವರು ಓದಲು ಹಿಂಜರಿಯುತ್ತಿದ್ದರು ಬಹುಶ: ಕಥೆ ಕಾದಂಬರಿಗಳಲ್ಲಿ ಬರುವ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅರಗಿಸಿಕೊಳ್ಳಲು ಒಳಗೆ ಶಕ್ತಿ, ಧೈರ್ಯ, ಬೇಕಾಗುತ್ತದೆ ಅದು ಸುಪ್ತವಾಗಿ ಅವರನ್ನು ತಡೆಯುತ್ತದೆ ಎನಿಸುತ್ತದೆ.
ಅಂತೆಯೇ ಈ ಬ್ಲಾಗ್ [ಅತ್ಯಚಾರದ] ಓದುವಾಗಲು ತಥ್ ಎನಿಸುತ್ತದೆ.
Tina said,
April 4, 2008 @ 06:30 p04 · Edit
ಶ್ರೀಯುತ ವೆಂಕಟೇಶ ಅವರೆ,
ನಿಮ್ಮ ಬಗ್ಗೆ ನನಗೆ ಅಯ್ಯೊ ಪಾಪ ಎಂತಲೂ ಅನಿಸುವದಿಲ್ಲ. ಯಾವ ಪ್ರಪಂಚದಲ್ಲಿ ಬದುಕುತ್ತಿದೀರಿ ನೀವು? ರೇಪು, ವಯಸ್ಕರ ಶಿಕ್ಷಣ, ಪೋಲೀಸು ಕಂಪ್ಲೇಂಟು, ಕೋರ್ಟು ಮೂಲಕ ರಕ್ಷಣೆ ಇತ್ಯಾದಿಗಳ ಬಗ್ಗೆ ಓದಿದರೆ ಅಕ್ಷರಲೋಕಕ್ಕೆ ಕಾಲಿಡುವವರು ಹಿಂಜರಿಯುತ್ತಾರೆಯೆ? ಹಾಗಿದ್ದರೆ ಇವತ್ತಿನ ನ್ಯೂಸ್ ಪೇಪರುಗಳು, ಟೀವಿ ಚ್ಯಾನೆಲ್ಲುಗಳು ನಿಮ್ಮ ಸ್ಟಾಂಡರ್ಡಿನ ಪ್ರಕಾರ ತಮ್ಮ ಕಚೇರಿಗಳಿಗೆ ಬೀಗ ಜಡಿದುಕೊಂಡು ಮನೆಗೆ ಹೋಗಬೇಕು. ಯಾಕೆಂದರೆ ನಿಮ್ಮ ಅನಕ್ಷರಕುಕ್ಷಿ ಅಥವ ಹೊಸತಾಗಿ ಅಕ್ಷರಸ್ಥರಾಗಿರುವ ನಿಮ್ಮಂತೆ ಪುಸ್ತಕ ಓದಲು ಹಿಂಜರಿಯುವ ಅಕ್ಕತಂಗಿಯರು ಟೀವಿ ನೋಡಿದರೆ, ನ್ಯೂಸು ಓದಿದರೆ ಮಾನಸಿಕವಾಗಿ ಬಹಳ ತೊಂದರೆ ಪಟ್ಟುಕೊಂಡಾರು ಅಲ್ಲವೆ? ಛೇ ಛೇ! ಅವ್ರಿಗೆ ಏನೂ ನೋಡದೆ ಅಡುಗೆಮನೆಯಲ್ಲಿ ತೆಪ್ಪಗೆ ಬೇಯಿಸಿ ಬಡಿಸಲು ತಾಕೀತುಮಾಡಿ. ನಿಮ್ಮ ಮನೆಯ ಹೆಣ್ಣುಮಕ್ಕಳು ಪ್ರಪಂಚದ ಯಾವ ತೊಂದರೆಯೂ ಇಲ್ಲದ ಹಾಗೆ ಅಲ್ಲಿ ಸೇಫಾಗಿರುತ್ತಾರೆ. ಇನ್ನು ನಮ್ಮ ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ ನಿಮಗಿರೋ ಐಡಿಯದ ಬಗ್ಗೆ ನನಗೆ ಚೆನ್ನಾಗಿ ಅರಿವಾಗಿದೆ. ಕರಾಟೆ ಆರೋಗ್ಯವರ್ಧನೆಗಾಗಿ ಫಿಟ್ನೆಸ್ಸಿಗಾಗಿ ಕಲಿಯುವ ವಿದ್ಯೆಯಲ್ಲ ಮಹಾಸ್ವಾಮೀ, ಅದು ಆತ್ಮರಕ್ಷಣೆಗಾಗಿಯೇ ಇರುವ ವಿದ್ಯೆ. ನಿಮ್ಮ ಜನರಲ್ ನಾಲೆಡ್ಜಿಗೆ ನನ್ನ ನಮಃಸ್ಕಾರ! ರೂಲುದೊಣ್ಣೆ ಖಾರದಪುಡಿಗಳೆಲ್ಲ ಗಂಡಸರಾಗಿ ಕಾಣುವದಿಲ್ಲ ಸ್ವಾಮೀ, ಅದು ಕೇವಲ ಹೆಂಗಸರನ್ನು ಹೆಂಗಸರಂತೆ ಕಾಣದೆ ತಮ್ಮ ಖಯಾಲಿ ಪೂರಯಿಸಿಕೊಳ್ಳಲು ಮಾಧ್ಯಮದಂತೆ ಕಾಣುವ ನರಾಧಮರ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಯೋಗಿಸಲು ಮಾತ್ರ. ಹೌದು, ನಿಮಗೇಕೆ ಇಷ್ಟೊಂದು ಹಿಂಸೆ ಅನ್ನಿಸುತ್ತಿದೆ? ನಾವು ನಿಮ್ಮ ವಿಷಯಾನ ಇಲ್ಲಿ ಚರ್ಚಿಸ್ತಾ ಇಲ್ಲ! ಕಣ್ಣುಬಿಟ್ಟು ಈ ಬರಹವನ್ನ ಮೊದಲು ಓದಿ. ಸಣ್ಣ ಹೆಣ್ಣುಮಕ್ಕಳಿಗೆ ಗಂಡುಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಎಂದು ಕಲಿಸಲಾಗುವುದಿಲ್ಲ, ತಮ್ಮನ್ನು ಸಾವಿರಾರು ವರುಷಗಳಿಂದ ’ನೀನು ಅಬಲೆ’ ಅಂತ ತಲೆಗೆ ತುಂಬಿಸುತ್ತ ಬಂದಿದೆಯಲ್ಲ ನಮ್ಮ ಪ್ರಜ್ನೆ? ಅದನ್ನ ತೆಗೆದುಹಾಕಿ ’ನೀನು ಸಬಲೆ, ಯಾರಿಗೂ ಕಡಿಮೆಯಿಲ್ಲ’ ಅನ್ನುವ ಧೈರ್ಯವನ್ನ ತುಂಬುವ ಕೆಲಸ ಇದು. ನಿಮ್ಮ ಯೋಚನೆಗೆ ಬಹುಶಃ ನಿಲುಕಲಿಕ್ಕಿಲ್ಲ ಬಿಡಿ ಸಾರ್. ಮತ್ತೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ. ಅವ್ರ ಸುಪ್ತಪ್ರಜ್ನೆಯ ಬಗ್ಗೆ ಕೂಡ ನೀವು ಆಳ ಅಧ್ಯಯನ ನಡೆಸಿ ಅವ್ರು ಪುಕ್ಕಲುಗಳು ಅಂತ ಡಿಸೈಡು ಮಾಡಿಯಾಗಿದೆ. ಇನ್ನೇನು ಹೇಳಲಿ? ಪಾಪ ಟೀವಿ ಸೀರಿಯಲ್ಲುಗಳನ್ನು ನೋಡಿಯೂ ಗಡಗಡ ನಡುಗುತ್ತಿರುತ್ತಾರೇನೊ ಅವರು?
ನಮ್ಮಲ್ಲಿ ಪುರುಷದ್ವೇಷವಿಲ್ಲ ಎಂದು ನಾವು ನಿಮಗೇಕೆ ಸಮಜಾಯಿಶಿ ಕೊಡಲಿ?
ನನಗೆ ನಿಮ್ಮ ಥರದವರ ಬಗ್ಗೆ, ನೀವುಗಳು ಹೀಗೆಲ್ಲ ತೇಜಸ್ವಿ, ಸಂಸ್ಕೃತಿ ಅಂತೆಲ್ಲ ಮಾತನಾಡುತ್ತ ನಡೆಸುವ ಮಾನಸಿಕ ಅತ್ಯಾಚಾರದ ಬಗ್ಗೆ ’ಅಸಹ್ಯ’ ಅನ್ನಿಸತ್ತೆ.
chetana chaitanya said,
April 5, 2008 @ 06:30 p04 · Edit
ನಮಸ್ತೇ ವೆಂಕಟೇಶ್,
ನಾಚಿಕೆಯಾಗ್ಬೇಕು ನಿಮಗೆ. ದಿನದಿನವೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ಲೈಂಗಿಕ ಅತ್ಯಾಚಾರಗಳ ಬಗ್ಗೆ ತಿಳಿದಿದ್ದೂ ( ತಿಳಿಯದಿದ್ದರೆ ಅಯ್ಯೋ ಪಾಪ!) ಹೀಗೆಲ್ಲ ಕಮೆಂಟು ಮಾಡಿರುವುದು ನಿಮ್ಮ ‘ಲೆವೆಲ್’ ಅನ್ನು ಸೂಚಿಸುತ್ತದೆ. ನಮ್ಮದು ಏನು ದರಿದ್ರ ಸಂಸ್ಕೃತೀನೋ, ದೇಶಾನೋ ಅಂತ ಹೇಳಿರುವ ನಿಮ್ಮ ದರಿದ್ರ ಮನಸ್ಥಿತಿಗೆ ನನ್ನ ಧಿಕ್ಕಾರ. ನಿಮ್ಮಂಥವರು ಮಾಡೋದೆಲ್ಲವನ್ನೂ ಸಹಿಸ್ಕೊಳ್ಳುತ್ತ ಬಿದ್ದಿರಬೇಕು,
ಸಣ್ನದೊಂದು ಪ್ರತಿಭಟನೆಯನ್ನೂ ತೋರಬಾರದು ಅನ್ನುವ ನಿಮ್ಮ ದಬ್ಬಾಳಿಕೆಯ ಮನೋಭಾವ ನಿಜಕ್ಕೂ ಅನುಕಂಪ ತರಿಸ್ತಿದೆ.
ಅಥವಾ ನೀವ್ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದೀರಿ? ಅನ್ನೋ ಅನುಮಾನವೂ ಮೂಡ್ತಿದೆ.
ಬಿಟ್ಬಿಡಿ. ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಾವು ಪುರುಷ ದ್ವೇಷಿಗಳಲ್ಲ. ಇದೇ ಬರಹಕ್ಕೆ ಪ್ರತಿಕ್ರಿಯಿಸಿರುವ ಸಹೃದಯೀ ಗಂಡಸರನ್ನು ನೋಡಿ ನಾಚಿಕೊಳ್ಳಿ.
ನಮ್ಮೆಲ್ಲ ಪ್ರಯತ್ನಕ್ಕೂ ಜೊತೆಯಾಗಬಲ್ಲ ಅಂಥವರು ‘ಅಪ್ಪಟ ಗಂಡಸರು’
ನಿಮ್ಮ ಬಗ್ಗೆ ಏನನ್ನಬೆಕೋ ತಿಳೀತಿಲ್ಲ.
ಸಧ್ಯಕ್ಕೆ, ‘ಅಸಹ್ಯ’ ಅನ್ನಿಸುತ್ತಿದೆ ಅಷ್ಟೇ.
ವಂದೇ,
ಚೇತನಾ ತೀರ್ಥಹಳ್ಳಿ
Venkatesh said,
April 7, 2008 @ 06:30 p04 · Edit
ಟೀನಾ ಜಿ,
ಅಕ್ಷರ ಕಲಿಯುವುದು ಬೇರೆ, ಪುಸ್ತಕ ಓದುವ ಹವ್ಯಾಸ ಬೇರೆ ಕೆಲವರಿಗೆ ಒಗ್ಗುತ್ತದೆ, ಕೆಲವರಿಗೆ ಒಗ್ಗುವುದಿಲ್ಲ.
ಇದನ್ನು ಈ ಸಂದರ್ಭದಲ್ಲಿ ಹೆಳಿದೆನೆ ಹೊರತು ಜೆನೆರಲೈಸ್ ಮಾಡಿಲ್ಲ. ಆದರೆ ನೀವು ಜನರಲೈಸ್ ಮಾಡಿಕೊಂಡಿದ್ದೀರ.
ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.
ನಿಮ್ಮ ಬರಹವೇನು ಅಪ್ರಸ್ತುತ ಎಂದೇನೂ ನಾನು ಹೇಳಿಲ್ಲ.
ಮಹಿಳೆಯರ ಪ್ರಚೋದಕ ರೀತಿ, ನೀತಿ,ಉಡುಗೆಗಳೇ ಕಾರಣ ಎಂದೇನಾದರೂ ಹೇಳಿದ್ದರೆ ನೀವು ಹೀಗೆ ಹಾರಾಡಬಹುದಿತ್ತು, ಆದ್ದರಿಂದ ಮಾನಸಿಕ ಪ್ರಬುದ್ದತೆಯ ಸರ್ಟಿಫಿಕೇಟನ್ನು ಯಾರಿಗೆ ಅನ್ವಯಿಸುತ್ತದೋ ನೋಡಿಕೊಳ್ಳೀ.
Tina said,
April 8, 2008 @ 06:30 p04 · Edit
ವೆಂಕಟೇಶ್,
ಯಾಕೊ ನಿಮ್ಮ ಮೂಡೇ ಬದಲಾದಹಾಗಿದೆ ಈ ಸಾರಿ! ನಾನು ಜನರಲೈಸ್ ಮಾಡುವ ಪೇಟೆಂಟನ್ನ ನೀವು ತೆಗೆದುಕೊಂಡುಬಿಟ್ಟಿದೀರಿ ಅಂದುಕೊಂಡಿದ್ದೆ, ಸದ್ಯ ಇನ್ನೂ ಆ ವಿಭಾಗ ಫ್ರೀಯಾಗಿ ಉಳಿದುಕೊಂಡಿದೆ ಎಂದು ತಿಳಿದು ಸಮಾಧಾನವಾಗಿದೆ. ನಿಮ್ಮ ಪದಗಳಿಗೆ ನನ್ನ ಪ್ರತಿಕ್ರಿಯೆಯನ್ನ ಓದಿದೀರಿ ತಾನೆ? ಅದರ ಹಿಂದೆಯೆ ನಿಮ್ಮ ಕಮೆಂಟು ಕೂಡ ಇತ್ತಲ್ಲ, ಅದನ್ನ ಇನ್ನೊಂದು ಸಲ ನೀವೇ ಸರಿಯಾಗಿ ಓದಿದ್ದರೆ ಚೆನ್ನಾಗಿತ್ತು. ಬರೆಯೋದು ಬರೆದುಬಿಟ್ಟು ’ನೀವು ಜನರಲೈಸ್ ಮಾಡಿದೀರ’ ಅಂತ ನುಣುಚಿಕೊಳ್ಳೋ ಹಿಪಾಕ್ರಸಿ ನನಗೆ ಹೊಸತೇನಲ್ಲ. ಸ್ವಾಮಿ, ನನ್ನ ಮಾನಸಿಕ ಪ್ರಬುದ್ಢತೆಯ ಬಗ್ಗೆ ನನಗೆ ಖಾತ್ರಿ ಇದೆ, ಅದ್ರ ಬಗ್ಗೆ ತಾವು ಬರೆದು ಬೆರಳು ನೋಯಿಸಿಕೊಳ್ಳುವ ತೊಂದರೆ ತೆಗೆದುಕೊಳ್ಳದಿದ್ದರೇನೆ ಒಳಿತು. “ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.” ಅಂದಿದೀರಿ, ಅಂಥಾ ಕಾಳಜಿ ನಿಮ್ಮ ಹಿಂದಿನ ಕಮೆಂಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲವಲ್ಲ!! ನಾನು ಯಾವ ವಿಷಯದ ಬಗ್ಗೆ ಹಾರಾಡಬಹುದು ಎಂದು ಕೂಡ ನೀವು ಊಹಿಸಿಬಿಟ್ಟಿದೀರ. ವಾಹವಾ! ನಾನು ಈ ರೀತಿ ತಮ್ಮ ಸಮಯ ವ್ಯಯ ಮಾಡಿದ್ದಕ್ಕೆ ವಿಪ್ರೀತ ಗಿಲ್ಟೀ ಫೀಲಿಂಗು ಸಾರ್! ಪುನಃ ತಮ್ಮ ಕೈ ಬಾಯಿ ನೋಯಿಸಿಕೊಳ್ಳುವ ಗೋಜಿಗೆ ಹೋಗಬೇಡಿರಿ. ಧನ್ಯವಾದ.
Ganesh K said,
April 11, 2008 @ 06:30 p04 · Edit
ಸೀರೆ ಉಟ್ಟುಕೊಂಡವರ ಮೇಲೆ ಅತ್ಯಾಚಾರಗಳಾಗುವುದಿಲ್ಲ. ಸೆಕ್ಸಿಯಾದ figure hugging, skimpy ಬಟ್ಟೆ ಹಾಕಿಕೊಂಡವರ, ಜೀನ್ಸ್, ಟೀ ಶರ್ಟ್ ಹಾಕಿಕೊಂಡವರ ಮೇಲೆ ರೇಪ್ ಆಗೋ ಚಾನ್ಸ್ ಇರ್ತವೆ ಅನ್ನೋ ಮಾತು ಕೇವಲ ವಿವೇಚನಾರಹಿತವಾದದ್ದು, ಬಾಲಿಶವಾದದ್ದು ಹಾಗೂ ಪಜ್ಞಾ ಶೂನ್ಯವಾದದ್ದು ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡ್ ಅಂದರೆ ಬೇರೆಯವರಿಗೆ ಮುಜುಗರ ಆಗದ ರೀತಿಯಲ್ಲಿ, ಪ್ರಚೋದಕ ಅನ್ನಿಸದ ರೀತಿಯಲ್ಲಿ ಇರಬೇಕೆಂಬ ಸದಾಶಯ ತಪ್ಪಲ್ಲವೆಂದು ಭಾವಿಸುವೆ. ವೆಂಕಟೇಶರ ಮೊದಲ ಪ್ರತಿಕ್ರಿಯೆಯೇ ಒಂದು ದಿಕ್ಕಿನಲ್ಲಿದ್ದರೆ ನಂತರದ್ದು ಇನ್ನೊಂದು ದಿಕ್ಕಿನಲ್ಲಿದೆ. ಎರಡರ ನಡುವೆ ಸಾಮ್ಯತೆ ಇಲ್ಲ. ಅವರು ಸಮರ್ಥನೆಯ ಆಸೆ ಕೈಬಿಡುವುದು ಉತ್ತಮ.
ಬೆಂಗಳೂರಿನಲ್ಲಿ ಐ.ಟಿ. ಸಾಫ್ಟ್ವ್ ವೇರ್ ಎಂಜಿನಿಯರುಗಳ ಮೇಲೆ ದಿನವೂ ನೆಡೆಯುವ ಹಲ್ಲೆಗಳನ್ನ ನೋಡಿದರೆ(ನಾನಿಲ್ಲಿ ಹೇಳುತ್ತಿರುವುದು ಪುರುಷರ ಬಗ್ಗೆ) ಸ್ತ್ರೀಯರು ತಮ್ಮ ಆತ್ಮರಕ್ಷಣೆಗೆ ತಕ್ಕುದಾದ ತಯ್ಯಾರಿ ಮಾಡಿಕೊಳ್ಳುವುದು ಉತ್ತಮ. ವೆಂಕಟೇಶರಿಗೆ ಉತ್ತರಿಸುವಾಗ, ಸ್ತ್ರೀಯರು ಮಾಡಿಕೊಳ್ಳಬೇಕಾದ ತಯ್ಯಾರಿಗಳ ಬಗ್ಗೆ ಸ್ತ್ರೀಯರು ಚರ್ಚಿಸಿದರೆ, ಪುರುಷರೇಕೆ ಪುರುಸೊತ್ತು ಮಾಡಿಕೊಂಡು ಬಂದು ಅಡಸಾ ಬಡಸಾ ಕಾಮೆಂಟ್ ಹಾಕೋದು ಅನ್ನೋದನ್ನ ನೇರವಾಗೇ, ಖಡಕ್ಕಾಗಿ ಹೇಳಿದ್ದರೆ ಚೆನ್ನಾಗಿರ್ತಿತ್ತು ಟೀನಾ.
ಟೀನಾ ಒಂದು ಉತ್ತಮ ಚರ್ಚೆಯನ್ನ ಹುಟ್ಟುಹಾಕಿದ್ದಾರೆ. ಅವರಿಗೆ ಧನ್ಯವಾದಗಳು.
ಗಣೇಶ್.ಕೆ