Archive for May, 2008

ಪಡಖಾನೆಯ ಹುಡುಗಿ - ಜೇನುಗಣ್ಣ ಹುಡುಗನಿಗೆ

ನಿನಗೆನ್ನ ಮೇಲೆ ಪ್ರೇಮವಿದೆಯೆ
ಕೇಳಲು ಸಮಯ ಸಾಲದಾಯಿತು
ನಿನ್ನ ಜೇನಕಂಗಳು
ನನ್ನೊಳಗಿಳಿವ ಪರಿಗೆ ಮರುಳಾದೆ
ಮಾತು ಮರೆತು ಹೋದವು

ಅದಕೆಂದೆ ಈಗ ಹೇಳುವೆ,

ಅಲ್ಲಿ ನೀನು ಚೆಲ್ಲಿಬಿಡುವ
ಹುಣ್ಣಿಮೆ ಬೆಳಕು ನನ್ನ
ನೀರಡಿಕೆಯನು ಹಿಗ್ಗಿಸುತ್ತದೆ

ಹಗುರಾಗಿ ನೀನು ನಕ್ಕಾಗ
ನಶೆಯೇರಿದಂತಾಗಿ
ಹಾವಿನಂತೆ
ಒಳಗೊಳಗೇ ಮಿಸುಕಾಡುವೆ

ಇಲ್ಲಿ ನಾನು ಒಂಟಿಯಾದಾಗೆಲ್ಲ
ನೀನು ಪಿಸುಗುಟ್ಟಿದಂತಾಗಿ
ಪುಳಕಗೊಳ್ಳುವೆ

ಒಮ್ಮೊಮ್ಮೆ  ನಾ ಸೋಕಿದಾಗ
ಅಪರಾಹ್ನದ ಕೊಳದಂತೆ ಮಿನುಗುವ
ನಿನ್ನ ಕಂಗಳ ನೆನೆನೆನೆದು
ಬೆವರುವೆ

ಆದರೆ,
ನಾನು ನಿಜವಾಗಿ ಕೇಳಬೇಕೆಂದಿದ್ದು
ನಿನ್ನ ಕಣ್ಣ  ಸತ್ಯಗಳು
ನಿನ್ನೂರ ಮಲೆಯ ಮರಗಳಷ್ಟೆ
ಗಟ್ಟಿಮುಟ್ಟು, ಒರಟು ಹಾಗೂ
ಪ್ರಾಮಾಣಿಕವಾಗಿರಲಿ
ಎಂದು ಮಾತ್ರ.

ಚಿತ್ರಕೃಪೆ: www.thepioneerwoman.com 

Comments (1)

ಅರಿವು, ನಿದ್ದೆಗಳ ಕಂಸದೊಳಗೆ..

 

Life Is something which happens when you can’t get to sleep – Fran Lebowitz.

ಬೆಳಜಾವ. ಅರೆ ತೂಕಡಿಕೆ. ಅರೆ ಎಚ್ಚರ. ಎಲ್ಲಿಂದಲೋ ಎಂ.ಎಸ್ ಸುಬ್ಬಲಕ್ಷ್ಮಿಯವರ ಸಖತ್ ಖಡಕ್ಕಾದ ಕಂಠದಿಂದ ‘ಕೌಸಲ್ಯಾ ಸುಪ್ರಜಾರಾಮ..’ ಬೆಳಗ್ಗೆ ಮೂರಕ್ಕೇ ಚುರುಕೇರುವ ಬೀದಿಗಳು. ವಾಕಿಂಗಿಗೆ ಎದ್ದು ಓಡಾಡುವವರ ಮನೆಗಳ ಗೇಟುಸದ್ದು. ಹೊಸ್ತಿಲಿಗೆ ನೀರು ಹುಯಿದು ರಂಗೋಲೆ ಬಿಡುತ್ತ ಬೆಳಗಿನ ತಿಂಡಿ, ಕಟ್ಟಬೇಕಾಗಿರುವ ಟಿಫನ್ ಬಾಕ್ಸು ಹಾಗು ಸಂಜೆಯ ಶಾಪಿಂಗ್ ಲಿಸ್ಟಿನ ಲೆಕ್ಕಾಚಾರ ಮಾಡುತ್ತ ಇರುವ ಮಲ್ಟಿಟಾಸ್ಕರ್ ಮನೆಯೊಡತಿ. ಹಾಲು, ಪೇಪರು, ಹೂವು ಮಾರುವವರ ಸೈಕಲಿನ ಕಿಣಿಕಿಣಿ. ನಿದ್ದೆಬಾರದೆ ಕಷ್ಟಪಡುತ್ತ ಈಮೇಲು ನೋಡಲು ಲಾಗಿನ್ನಾದರೆ, ಈ ಹೊತ್ತಲ್ಲದ ಹೊತ್ತಲ್ಲಿ ಸಕ್ಕರೆನಿದ್ದೆ ಹೊಡೆವುದ ಬಿಟ್ಟು ದೆವ್ವದ ಹಾಗೆ ಎಚ್ಚರವಿದೀಯಲ್ಲ ಎಂದು ಅಣಗಿಸುವ ದೂರದೇಶದ ಸ್ನೇಹಿತ. ಮೂರುಗಂಟೆಗೆ ಅಲಾರಮು ಇಟ್ಟು ಎದ್ದು ಓದುತ್ತ ಇರುವ ಹಿಂದಿನ ಮನೆಯ ಹುಡುಗ.

ನಿದ್ದೆಗೆಡುವುದು ಅಂದರೆ ಆಗುತ್ತಿರಲಿಲ್ಲ ನನಗೆ. ಮನೆಯಲ್ಲಿ ಯಾವಾಗಲು ನನ್ನ ನಿದ್ದೆಯ ಬಗ್ಗೆ ಕಂಪ್ಲೇಂಟುಗಳೆ. ಹತ್ತನೆ ಕ್ಲಾಸಿನಲ್ಲಿರುವಾಗ ಅಮ್ಮ ಒಮ್ಮೆ ಹಠಾತ್ತನೆ ನನ್ನ ಸ್ಕೂಲಿಗೆ ಭೇಟಿನೀಡಿ ನನ್ನ ಮೇಷ್ಟರುಗಳ ಬಳಿ ನನ್ನ ನಿದ್ದೆಖೋರತನದ ಬಗ್ಗೆ ತಿಳಿಸಿಬಿಟ್ಟು ನನಗೆ ಫಜೀತಿ ಮಾಡಿದ್ದರು. ಆಗಿಂದ ನನಗೆ ಡಬಲ್ ಹೋಂವಕರ್ು, ಟಿಆರೆನ್ ಮೇಷ್ಟರು ಹೇಳದೆ ಕೇಳದೆ ನನ್ನ ಓದಿನ ಬಗ್ಗೆ ವಿಚಾರಿಸಲು ಮನೆಗೆ ಭೇಟಿ ನೀಡುವುದು, ಇತ್ಯಾದಿ ತೊಂದರೆಗಳು ಆರಂಭವಾದವು. ಅದಕ್ಕು ಮುಂಚೆ ಪುಟ್ಟದಾಗಿದ್ದಾಗ ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತ ಇದ್ದೆ. ಸಂಜೆಯಾದರೆ ಕರೆಂಟು ಇರುತ್ತಿರಲಿಲ್ಲ. ಹೊರಗೆ ಯಾವಾಗಲು ಸುರಿಯುತ್ತಲೆ ಇರುವ ಮಳೆ. ಮನೆಯಲ್ಲಿ ನನ್ನ ಅಜ್ಜಿಯನ್ನು ನೋಡಲು ಬರುವ ಮುದುಕಿಯರು ವಿಧೇಯಳಂತೆ ಕಾಣುತ್ತಿದ್ದ ನನ್ನ ಕೂರಿಸಿಕೊಂಡು ಪ್ರಾರ್ಥನೆಗಳನ್ನು ಹೇಳಿಕೊಡುವರು. ಅದಾದ ಮೇಲೆ ನಾನು ಅವರನ್ನು ಕಥೆ ಹೇಳಲು ಗೋಗರೆಯುವೆ. ಆವಾಗ ಅವರು ತಮ್ಮ ಅಜ್ಜಿಯಂದಿರು ತಮಗೆ ಹೇಳಿದ ರಾಜರಾಣಿಯರ, ಪ್ರಾಣಿಪಕ್ಷಿಗಳ, ಭೀಕರ ಡಕಾಯಿತರ, ಭೂತಪ್ರೇತಗಳ ಕಥೆಗಳನ್ನು ರಿಪೀಟು ಮಾಡುವರು. ಆ ಮೂಲಕ ನನ್ನಲ್ಲಿ ದೈವಭೀತಿಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುವರು. ಲಾಟೀನಿನ ಮಂದಬೆಳಕಿನಲ್ಲಿ ಅವರ ಮುಖಗಳು ಹಗಲಿನಲ್ಲಿ ಕಾಣುವುದಕ್ಕಿಂತ ವಿಚಿತ್ರವಾಗಿ ಕಂಡು ನಾನು ಕಂಬಳಿಯನ್ನು ಗಟ್ಟಿಯಾಗಿ ಹೊದ್ದುಕೊಳ್ಳುವ ಹಾಗೆ ಮಾಡುತ್ತಿದ್ದವು. ಗೋಡೆಯ ಮೇಲೆ ಆಡುವ ನಮ್ಮ ನೆರಳುಗಳನ್ನೆ ನೋಡುತ್ತ ಮಳೆಯ ಸದ್ದು ಕೇಳುತ್ತ ನಾನು ನಿದ್ರೆಗೆ ಜಾರುತ್ತಿದ್ದೆ.

ಒಮ್ಮೊಮ್ಮೆ ಅಪ್ಪ ಅಮ್ಮ ಇಬ್ಬರೂ ಕೆಲಸದ ಮೇರೆಗೆ ಎಲ್ಲಾದರು ಹೋಗಬೇಕಾಗಿ ಬಂದಾಗ ಕೆಪಿಜಿ ಮೇಷ್ಟರ ಮಗಳು ಸಂಧ್ಯಾ ನಮ್ಮ ಜತೆ ಬಂದು ಇರುವುದಿತ್ತು. ಎಸೆಸೆಲ್ಸಿ ಎಕ್ಸಾಮಿನ ಸಮಯ. ಆಕೆ ರಾತ್ರಿಯೆಲ್ಲ ಕರೆಂಟು ಇಲ್ಲದಿದ್ದರು ಚಿಮಣಿಎಣ್ಣೆದೀಪದ ಬೆಳಕಲ್ಲಿ ಓದುವಳು. ಚಿಮಣಿ ಬುಡ್ಡಿಯಿಂದ ಪುಸ್ತಕದ ಮೇಲೆ ಸಿಡಿವ ಕಪ್ಪನ್ನು ಮೆಲ್ಲಗೆ ಒರೆಸುತ್ತ.. ಕಣ್ಣಿಗೆ ಆಗಾಗ ರೋಸ್ ವಾಟರು ಬಿಟ್ಟುಕೊಳ್ಳುತ್ತ…ಅವಳ ಗುಂಗುರುಕೂದಲು, ಪುಸ್ತಕದುದ್ದಕ್ಕು ಹರಿದಾಡುವ ಚುರುಕುನೋಟ, ಪೆನ್ಸಿಲಿನ ಹರಿದಾಟ…. ನೋಡನೋಡುತ್ತ ನನಗೆ ತೂಕಡಿಕೆ. ‘ಒಂದಿನಾನಾದ್ರು ಅವಳ ಹಾಗೆ ಓದಿದೀಯೇನೆ?’ ಎಂದು ಬೇಸರಿಸುವ ಅಮ್ಮ. ನನ್ನ ಎಸೆಸೆಲ್ಸಿಯ ದಿನಗಳಲ್ಲಿ ನಾನು ನಿದ್ದೆಗೆಟ್ಟು ಓದಿದ್ದು ಕೊನೆಯ ಹದಿನೈದು ದಿನಗಳು ಮಾತ್ರ. ಅದೂ ಅಮ್ಮನ ಕಾಫಿ, ಅಲಾರಮ್ಮುಗಳ ದೆಸೆಯಿಂದ. ‘ಮನಸ್ಸಿಟ್ಟು ಓದಿದ್ದಿದ್ರೆ ಇನ್ನೂ ಹೆಚ್ಚಿಗೆ ಸ್ಕೋರು ಮಾಡ್ತಿತ್ತು’ ಎಂದು ಅಮ್ಮ ಅಪ್ಪ ಮಾತಾಡಿಕೊಂಡಾಗ ತಲೆಕೆರೆದುಕೊಂಡು ಸುಮ್ಮನೆ ಕೂತಿದ್ದೆ.  ಹಾಸ್ಟೆಲು ಸೇರಿದ ಮೇಲೆ ಹಾಳು ನಿದ್ದೆ ಎಲ್ಲಿ ಹಾರಿಹೋಯಿತೊ ತಿಳಿಯದು. ಮನೆಯಲ್ಲಿ ತಬ್ಬಿಕೊಳ್ಳುತ್ತಿದ್ದ ಸಿಹಿನಿದ್ದೆ ಯಾಕೊ ಬರಲೆ ಒಲ್ಲೆನೆನ್ನತೊಡಗಿತು. ಎಷ್ಟೆಷ್ಟೋ ಹೊತ್ತಿಗೆ ಮಲಗುವದು, ಏಳುವದು, ಓದುವದು.. ಹತ್ತಕ್ಕೆ ಮಲಗಿ ಐದಕ್ಕೇಳುವ ರುಟೀನು ಮರೆತೇ ಹೋಯಿತು.

ಮಗಳು ಹುಟ್ಟಿನಿಂದಲೆ ನಿಶಾಚರಿ. ಹಗಲೆಲ್ಲ ಮಲಗಿ ರಾತ್ರಿಯೆಲ್ಲ ಆಡುವ ಚಕೋರಿ. ನನಗೋ ನಿದ್ದೆಗೆಟ್ಟು ಹಲುಬುವಂತಾಗುತ್ತಿತ್ತು. ಕಣ್ಣ ಸುತ್ತ ಕಪ್ಪು ವತರ್ುಲಗಳು. ಸುಮಾರುಸಾರಿ ಮಗುವನ್ನು ತೊಡೆಯಮೇಲಿಟ್ಟುಕೊಂಡು ‘ಮಲಗೇ ತಾಯಿ!’ ಎಂದು ಗೋಳಾಡುತ್ತ ಇದ್ದೆ. ಅದು ನನ್ನ ಮುಖ ನೋಡಿ ಕಿಲಕಿಲ ನಗುತ್ತಿತ್ತು. ಆಕೆಗಾಗಿ ಹಾಡುವದು, ಕಥೆ ಹೇಳುವುದು, ಆಟವಾಡುವದು.. ಇದು ನಾನೇ ಏನು? ಅಮ್ಮನ ಮಾತು ಕೇಳದೆ ನಿದ್ದೆಮಾಡುತ್ತಿದುದಕ್ಕೆ, ಅವರ ರಾತ್ರಿಗಳ ನಿದ್ದೆಗೆಡಿಸಿದ್ದಕ್ಕೆ ನನಗೆ ದೊರಕಿರುವ ಶಿಕ್ಷೆಯಿದು ಎಂದು ಅಂದುಕೊಳ್ಳುತ್ತಿದ್ದೆ. ಆದರೆ ಆ ರಾತ್ರಿಗಳಲ್ಲಿ ನಾನು ಕಂಡುಕೊಂಡ ಮಮತೆ, ಅಕ್ಕರೆ, ಹೊಳಹುಗಳಿಗೆ ಯಾವ ಯಮನಿದ್ದೆಯೂ ಸಾಟಿಯಾಗಲಾರದು.

ಈಗ ಬೇಕೆಂದರು ನಿದ್ದೆ ಬರದು. ಎಚ್ಚರವಾದೊಡನೆ ಕಿಟಕಿಯಿದೆ, ಹೊರಗಿನ ನೀರವ ಬೀದಿಗಳಿವೆ. ಹಿಂದಿನ ಮನೆಯ ಇನ್ಸೊಮ್ನಿಯಾಕ್ ಮುದುಕಿಯ ಗೊಣಗಾಟಗಳಿವೆ, ಶೆಲ್ಫಿನಲ್ಲಿ ಓದದೆ ಬಿಟ್ಟಿರುವ ಪುಸ್ತಕಗಳಿವೆ, ಲೇಖನಿಯಿದೆ. ನಿದ್ರೆ ಬರದ ರಾತ್ರಿಗಳೆ ಸಿಹಿಯಾಗಿ ಕಾಣತೊಡಗಿವೆ. ಕನ್ನಡಿ ಕಂಡಕೂಡಲೆ ನಿಂತು ಪ್ರತಿಬಿಂಬ ನೋಡಿಕೊಳ್ಳುವ ಹಾಗೆ, ಒಂದು ರೀತಿಯ ಚಟ ಇದು. ಹಗಲಿನ ಎಲ್ಲ ಖಾಲಿತನ, ನಾಟಕಗಳ ಅವಲೋಕಿಸಲು ಸರಿಯಾದ ಸಮಯ. ಯಾವುದನ್ನು ನಾನು ನನ್ನ ಜೀವನದ ಪ್ರಮುಖ ಭಾಗವೆಂದುಕೊಡಿದ್ದೆನೋ ಅದು ಇಂದು ಗೌಣವಾಗಿರುವುದು, ನಿದ್ದೆಗೆಟ್ಟು ಕೂರುವ ಸಂತಸಕ್ಕಾಗಿ ನಾನು ಹೀಗೆ ಎಚ್ಚರಗೊಳ್ಳುವುದು, ಹಳೆಯ ಮುದುಕಿಯರ ಕಥೆಗಳಷ್ಟೆ ಆತ್ಮೀಯವೆನಿಸುವುದು. ಯಾವುದೊ ರೇಡಿಯೋ ಚ್ಯಾನೆಲ್ಲಿನಲ್ಲಿ ಹಾಡುಗಾರನೊಬ್ಬ ತಾರಸ್ಥಾಯಿಯಲ್ಲಿ ಗುನುಗುತ್ತಿರುವ:
 

And you can’t fight the tears that ain’t coming
Or the moment of truth in your lies
When everything feels like the movies
Yeah you bleed just to know you’re alive

(Iris, City of Angels)

 

Pic courtesy: www.victorainweb.org

Pic info: ‘A Fairy Tale’ by Arthur Wardle RBI RBA, 1864-1949. Oil on canvas. 115 x 165 centimetres. “All seemed to Sleep, the timid Hare on Form” — Scott. Exhibited at the Royal Academy, 1895 (no. 222). The artrist’s well-known skill at drawing and painting animals here plays a part in a late example of ‘Fairy Painting’ 

Comments (4)

ನಂಬಿಕೆ ಎಂಬ ಪುಟ್ಟ ಪದ.

 

ನಂಬಿಕೆ. ಫೆಯಿತ್.
ಎಷ್ಟು ಪುಟ್ಟ ಪದ!
ಆದರೆ ಅಷ್ಟೆ ದೊಡ್ಡದು ಕೂಡ.

ಎಲ್ಲೀ ಆರೋವೇ ಒಬ್ಬ ವಿಜ್ನಾನಿ. ಅಂತರಿಕ್ಷದಲ್ಲಿ ಇತರ ಜೀವಿಗಳು ಇರುವ ಸಾಧ್ಯತೆಗಳನ್ನು ಹುಡುಕುತ್ತ ತನ್ನ ಜೀವನವನ್ನೆ ಕಳೆದಿರುವಾಕೆ. ಆಕೆಗೆ ತನ್ನ ಕೆಲಸದೆದುರು ಎಲ್ಲವೂ ಗೌಣ. ಆಕೆಯನ್ನು ಪ್ರೀತಿಸುವ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಪಾಮರ್ ಜಾಸನನ್ನು ಕೂಡ ಈ ಕಾರಣದಿಂದ ನಿರಾಕರಿಸಿರುವಾಕೆ. ಬಹಳ ಶ್ರಮಿಸಿ, ಅಡಚಣೆಗಳನ್ನು ಎದುರಿಸಿದ ಮೇಲೆ ಒಂದು ದಿನ ಎಲ್ಲೀ ನಕ್ಷತ್ರವೊಂದರ ಕಡೆಯಿಂದ ಬಂದ ಒಂದು ಸಿಗ್ನಲ್ಲನ್ನು ಯಶಸ್ವಿಯಾಗಿ ಪಡೆದುಕೊಳ್ಳುತ್ತಾಳೆ. ಸಿಗ್ನಲ್ಲನ್ನು ಡಿಕೋಡ್ ಮಾಡಿ ಅದರಲ್ಲಿ ಸೂಚಿಸಿರುವಂತೆ ಇನ್ನೊಂದು ಪ್ರಪಂಚವನ್ನು ತಲುಪಲು ಯಂತ್ರವೊಂದನ್ನು ನಿರ್ಮಿಸಲಾಗುತ್ತದೆ. ಭೂಮಿಯನ್ನು ಪ್ರತಿನಿಧಿಸಲು ಸರಿಯಾದ ಅಭ್ಯರ್ಥಿಗೆ ಹುಡುಕಾಟ ಆರಂಭವಾಗುತ್ತದೆ. ಆಯ್ಕೆಸಮಿತಿಯೆದುರು ಎಲ್ಲೀ ಬಂದುನಿಲ್ಲುತ್ತಾಳೆ. ಆದರೆ ಸಮಿತಿಯಲ್ಲಿರುವ ಪಾಮರ್ ಜಾಸನಿಗೆ ಆಕೆಯನ್ನು ಹೋಗಗೊಡಲು ಇಷ್ಟವಿಲ್ಲ. ಆತ ಎಲ್ಲರ ಮುಂದೆ ಎಲ್ಲೀಯನ್ನು ಕುರಿತು ’ನಿನಗೆ ದೇವರಲ್ಲಿ ನಂಬಿಕೆಯಿದೆಯೆ?’ ಎಂದು ಪ್ರಶ್ನಿಸುತ್ತಾನೆ. ದೇವರನ್ನು ನಂಬದ ಆಕೆ ಈ ಪ್ರಶ್ನೆಯ ಮಹತ್ವವನ್ನು ಪ್ರಶ್ನಿಸುತ್ತಾಳೆ. ’ಭೂಮಿಯ ಹೆಚ್ಚೂಕಡಮೆ ತೊಂಭತ್ತೈದು ಪರ್ಸೆಂಟು ಜನ ದೇವರನ್ನು ನಂಬುವವರು. ಹಾಗಾಗಿ ಭೂಮಿಯನ್ನು ಪ್ರತಿನಿಧಿಸುವ ಅಭ್ಯರ್ಥಿಯಲ್ಲಿ ಕೂಡ ನಂಬಿಕೆಯಿರುವುದು ಬಹಳ ಅವಶ್ಯ ’ ಎನ್ನುತ್ತಾನೆ ಪಾಮರ್. ಎಲ್ಲೀಯ ಮೌನ ಆಕೆಯನ್ನು ಅನರ್ಹಳನ್ನಾಗಿ ಮಾಡುತ್ತದೆ.

ಜೋಡೀ ಫಾಸ್ಟರ್ ಮತ್ತು ಮ್ಯಾಥ್ಯೂ ಮೆಕ್ಕೋನಾಹೀ ನಟಿಸಿರುವ ‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ನಡೆವ ಘಟನೆಯಿದು. ವಿಜ್ನಾನಿಯಾಗಿರುವ ಎಲ್ಲೀಯ ತೊಳಲಾಟ ಇಲ್ಲಿ ಬಹಳ ಮುಖ್ಯವಾದ್ದು. ಜೀವನವಿಡೀ ರಾಶನಲ್ ಆಗಿ ಪ್ರತಿಯೊಂದನ್ನೂ ಪ್ರಶ್ನಿಸಿಕೊಂಡು ಬೆಳೆದ ವಿಜ್ನಾನಿಯೊಬ್ಬಳು ತನ್ನ ಜೀವನದ ಅತ್ಯಂತ ಪ್ರಮುಖ ಅವಕಾಶವನ್ನು ತನ್ನ ನಂಬಿಕೆಯ ಕಾರಣದಿಂದಾಗಿ ಕಳೆದುಕೊಳ್ಳಬೇಕಾಗಿ ಬರುವ ಸನ್ನಿವೇಶ. ದೇವರಲ್ಲಿ ನಂಬಿಕೆಯಿದೆ ಎಂದರೆ ಆಕೆ ಇಲ್ಲಿಯತನಕದ ತನ್ನ ಕೆಲಸಕ್ಕೆ, ತನ್ನ ವೈಯುಕ್ತಿಕ ನಂಬಿಕೆಗೆ ಕೊಡಲಿಪೆಟ್ಟು ಹಾಕಿದಹಾಗಾಗುತ್ತದೆ. ಇಲ್ಲವೆಂದರೆ ಆಕೆಯ ಇಲ್ಲಿಯತನಕದ ಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆಹಣ್ಣಿನ ಹಾಗೆ ತೊಳೆದುಹೋಗುತ್ತದೆ. ಸಾಕ್ರಟೀಸನ ಮುಂದೆಯೂ ಇಂಥದೇ ಪ್ರಶ್ನೆಯಿದ್ದದ್ದು. ಆತ ಆಯ್ಕೆಮಾಡಿಕೊಂಡಿದ್ದು ವಿಷವನ್ನು. ಗೆಲಿಲಿಯೊನ ವಿಷಯದಲ್ಲಿ ನಡೆದದ್ದೂ ಇದೇ. ಸೂರ್ಯ ಸ್ಥಿರವಾದ್ದೆಂದೂ, ಭೂಮಿ ತಿರುಗುವುದೆಂಬ ತನ್ನ ವಾದವನ್ನು ಬಿಟ್ಟುಕೊಡಲು ಆತ ಸಿದ್ಧನಿರಲಿಲ್ಲ. ಆದರೆ ಭೂಮಿ ತಿರುಗದೆಂದು ಪಾಶ್ಚಿಮಾತ್ಯ ಬೈಬಲ್ಲಿನಲ್ಲಿ ಬರೆದಿದ್ದು ಗೆಲಿಲಿಯೋನ ವಾದ ಇದಕ್ಕೆ ಧಕ್ಕೆಯಾಗುವಂತಿತ್ತು ಎಂಬುದು ಚರ್ಚಿನ ವಾದ. ತನ್ನ ಅರಿವಿನೆಡೆಗೆ ವಾಲಿನಿಂತ ಗೆಲಿಲಿಯೋನನ್ನು ಗೃಹಬಂಧನದಲ್ಲಿರಿಸಲಾಯಿತು. ಸುಮಾರು ಮುನ್ನೂರು ವರುಷಗಳ ನಂತರ ಪೋಪ್ ಪಯಸ್ ಗೆಲಿಲಿಯೋನ ಯಾರಿಗೂ ತಲೆಬಾಗದ ಚೈತನ್ಯವನ್ನು ಪ್ರಶಂಸಿಸಿದರು. ಚರ್ಚು ಆಗಿನಕಾಲದ ಸಮಾಜದ ನಂಬಿಕೆಯನ್ನು ಎತ್ತಿಹಿಡಿಯಲು ಗೆಲಿಲಿಯೋನ ವಿರುದ್ಧ ತಾವು ಮಾಡಿದ್ದು ಸರಿ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತು.

ಈಗಿನ ದಿನಗಳ ಬಗ್ಗೆ ಮಾತನಾಡುವದಾದರೆ ನಾವು ಬಲುದೂರ ಸಾಗಿಬಂದಿದ್ದೇವೆ. ನಮ್ಮ ನಂಬಿಕೆ ಶ್ರದ್ಧೆಗಳು ಹೆಚ್ಚಿನಪಕ್ಷ ನಮ್ಮ ಆಯ್ಕೆಗೆ ಒಳಪಟ್ಟಿವೆ. ಸಾಮಾಜಿಕ ಚೌಕಟ್ಟುಗಳ ಆಚೆ ನಿಂತು ನಮ್ಮ ನಂಬಿಕೆಗಳನ್ನು ಅಳೆದುಕೊಳ್ಳುವದು ನನ್ನಂತಹ ಜನಸಾಮಾನ್ಯರಿಗು ಇಂದು ಸಾಧ್ಯವಿದೆ. ಕೆಲವೆಡೆ ಇದು ಟೀಕೆಗೆ, ಕೆಲವೆಡೆ ಪ್ರಶಂಸೆಗೆ ಗುರಿಯಾಗಿದೆ. ನಂಬಿಕೆಯಿರುವ ಒಬ್ಬ ವ್ಯಕ್ತಿ ನಂಬಿಕೆಯನ್ನು ಪ್ರಶ್ನಿಸುವ ವ್ಯಕ್ತಿಯೊಡನೆ ಕೂತು ವಿಚಾರವಿನಿಮಯ ನಡೆಸುವ ಸಾಧ್ಯತೆಗಳು ಇವತ್ತು ಇವೆ. ನಾವು ನೈತಿಕ ಅವನತಿಯ ಕಡೆ ಸಾಗಿದ್ದೇವೆಯೆ ಅಥವಾ ಏಳಿಗೆಯೆಡೆ ಹೆಜ್ಜೆಹಾಕುತ್ತಿದ್ದೇವೆಯೆ, ನಿರ್ಧಾರ ನಿಜಕ್ಕು ಕಷ್ಟ. ಆದರೆ ನಂಬಿಕೆಯ ಎರಡೂ ಮುಖಗಳು ಒಂದನ್ನೊಂದು ಕಣ್ಣಿಟ್ಟು ನೋಡುವುದು ಸಾಧ್ಯವಾಗಿರುವುದು ನಮ್ಮ ಕಾಲದಲ್ಲಿಯೇ ಎನ್ನುವದು ಹೆಮ್ಮೆಯ ವಿಚಾರ. ಹಲವಾರು ವೈರುಧ್ಯಗಳು ನಮ್ಮೊಳಗೇ ಇವೆ. ಅವು ನಮ್ಮ ನಂಬಿಕೆಯನ್ನು ಪ್ರಶ್ನಿಸುತ್ತ ಅವನ್ನು ಗಟ್ಟಿಗೊಳಿಸುತ್ತಲೋ, ಇಲ್ಲ ಕಡಿಮೆಮಾಡುತ್ತಲೋ ಹೋಗುತ್ತವೆ.

‘ಕಾಂಟ್ಯಾಕ್ಟ್’ ಚಲನಚಿತ್ರದಲ್ಲಿ ಎಲ್ಲೀ ಆರೋವೇಗೆ ಕೊನೆಗೂ ಆ ಇನ್ನೊಂದು ಪ್ರಪಂಚಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಸುಮಾರು ಇಪ್ಪತ್ತಾರು ಜ್ಯೋತಿರ್ವರ್ಷಗಳನ್ನು ದಾಟಿ ಹೊಸಲೋಕಕ್ಕೆ ಕಾಲಿಡುವ ಎಲ್ಲೀ ತಾನು ಕಾಣುವ ಅದ್ಭುತ ನೋಟಗಳಿಗೆ ನಿಬ್ಬೆರಗಾಗಿ ಕಣ್ಣೀರು ಸುರಿಸುತ್ತ ತನಗೆ ಅರಿವಿಲ್ಲದಂತೆ, ’ಓಹ್, ದೇವರೆ!” ಎಂದು ಉದ್ಗರಿಸುತ್ತಾಳೆ. ’ಇಲ್ಲಿಗೆ ನನ್ನ ಬದಲು ಕವಿಯೊಬ್ಬರನ್ನು ಕಳಿಸಿರಬೇಕಿತ್ತು’ ಎಂದು ಯೋಚಿಸುತ್ತಾಳೆ. ಮಾನವಜನಾಂಗಕ್ಕೆ ಆಕೆಗಿಂತ ಒಳ್ಳೆಯ ಪ್ರತಿನಿಧಿ ಸಿಗುವುದು ಸಾಧ್ಯವಿತ್ತೆ?

 ಚಿತ್ರಕೃಪೆ: www.impawarads.com ಮತ್ತು www.seti.org

 

 

 

 

 

Comments (11)

ಪರಿಚಯ: ಹೀಗೊಬ್ರಿದಾರೆ ವೆಂಕಟೇಶ್ ಅಂತ!!

ನಮಸ್ಕಾರ ಎಲ್ಲರಿಗೂ,

ನನಗೆ ಕೆಲದಿನಗಳ ಹಿಂದೆ ’ಏನು ಮಾಡಬಹುದು?’ ಮತ್ತು ’ಹೀಗೆ ಶುರು ಮಾಡೋಣವೆ?’ ಪೋಸ್ಟುಗಳಿಗೆ ಬಹಳ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರಕಿತು. ಸರಿ ಏನಾದರು ಆಗಲಿ ಒಂದೆಡೆ ಭೇಟಿಯಾಗಿ ಈ ಬಗ್ಗೆ ಚರ್ಚೆ ಮಾಡಲೆಬೇಕೆಂಬ ಹುಮ್ಮಸ್ಸು ಹೊತ್ತು ಪ್ಲಾನು ಮಾಡುತ್ತಿರುವಾಗ ಶ್ರೀಯುತ ವೆಂಕಟೇಶರೆಂಬ ಮಹಾನುಭಾವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ನಮ್ಮ ಅಭಿಪ್ರಾಯಗಳನ್ನು ನಾವು ವ್ಯಕ್ತಪ ಡಿಸಿದರೆ ವೆಂಕಟೇಶರು ನಾವು ನಿರೀಕ್ಷಿಸಿರದ ಮಟ್ಟದ ವಿಕೃತಮನೋಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಿ ತಾವು ಎಂಥವರೆಂದು ಪ್ರಪಂಚಕ್ಕೇ ಸಾರುವ ಹುಂಬತನವನ್ನು ತೋರಿದ್ದಾರೆ. ಈ ಮನುಷ್ಯನ ಐಡಿ ವೆಬ್ ದುನಿಯಾದ್ದಾಗಿದ್ದರು ಸ್ನೇಹಿತ ತವಿಶ್ರೀಯವರು ವೆಬ್ ದುನಿಯಾವನ್ನು ಸಂಪರ್ಕಿಸಿದಾಗ ಅವರು ತಮ್ಮಲ್ಲಿಈ  ಹೆಸರಿನ ಯಾವ ವ್ಯಕ್ತಿ ಇಲ್ಲವೆಂದೂ, ಈ ಐಡಿಯನ್ನು ವೆಬ್ ದುನಿಯಾ ಉಪಯೋಗಿಸುವವರಿಗೆ ನೀಡಲಾಗುವುದರಿಂದ ಇದು ಬೇರಾರೋ ಇರಬೇಕೇಂಬ ಸಮಜಾಯಿಶಿಯನ್ನು ನೀಡಿದರು. ಇದಲ್ಲದೆ ಅಚ್ಚರಿಹುಟ್ಟಿಸುವ ವಿಚಾರವೆಂದರೆ ಗೆಳತಿ ಚೇತನಾಳ ಬಗ್ಗೆ ಏಕವಚನ ಬಳಸಿ ಹೊಲಸಾಗಿ ಬರೆದಿರುವ ಬರೆದಿರುವ ಇದೇ ಮನುಷ್ಯ ಚೇತನಾ ಹಾಗು ಸುಪ್ರೀತರು ಸಹಲೇಖಕರಾಗಿರುವ ಓಶೋ ಬಗೆಗಿನ ಬ್ಲಾಗ್ ಆದ www.hakkihadu.blogspot ನ ಸಹಲೇಖಕನಾಗಿರುವುದು. ಎಲ್ಲಿ ಓಶೋ, ಎಲ್ಲಿ ವೆಂಕಟೇಶ್?

ಯಾಕೆ ವೆಂಕಟೇಶ್, ನಿಮಗೆ ನಿಮ್ಮ ಸಹಲೇಖಕಿಯ ಬಗ್ಗೆ ತಿಳಿದಿಲ್ಲವೆ? ಈ ಕೆಳಗಿನ ಮಾತುಗಳು ಉದ್ದೇಶಪೂರ್ಣವೆ ಅಥವ ಈ ವಿಕೃತಬುದ್ಧಿ ನಿಮ್ಮ ಸ್ಪ್ಲಿಟ್ ಪರ್ಸನಾಲಿಟಿಯ ಕಡೆಗೆ ಬೆರಳು ಮಾಡುತ್ತದೆಯೆ? ಈ ಕೆಳಗಿನ ಕಮೆಂಟುಗಳನ್ನು ಪ್ರಕಟಿಸುತ್ತಿರುವ ಒಂದೇ ಉದ್ದೇಶ - Mr. Venkatesh - whoever-you -are, I will not give you the pleasure of relishing your words. I give them back to you. Eat them and be content with your MCP attitude. I warn you for the first and last time that If I see another mail from you on my blog, I will lodge a complaint against you, what if you are in Haryana or Alaska. I know very well that people like you are sick and need counseling. Therefore this warning. Mind your language before saying anything about a person, especially a woman. I can understand why you could not stand my blog post. ನನಗೆ ಟೈಟಲ್ಲುಗಳ ನೀಡಲು, ನನ್ನ ಸ್ನೇಹಿತೆಯ ಬಗ್ಗೆ ಅಸಹ್ಯವಾಗಿ ಮಾತನಾಡಲು ನಿಮಗೆಷ್ಟು ಧೈರ್ಯ?

ಈ ಕೆಳಗೆ ವೆಂಕಟೇಶರ ಮೊನ್ನೆಯ ಕಮೆಂಟು, ಅದರ ನಂತರ ಹಿಂದಿನ ಕಮೆಂಟುಗಳು ಹಾಗೂ ನಮ್ಮ ಉತ್ತರಗಳನ್ನು ನಿಮಗಾಗಿ ನೀಡಿದೇನೆ.

 

 

 Venkatesh
venkven@webdunia.com | 125.20.36.178

ಮಿಸ್. ಕಿರು’ಚಾಟರ್ ಬಾಕ್ಸ್,
ಪರವಾಗಿಲ್ವೆ ಗೆದ್ದೆನೆಂಬ ತಮ್ಮ ಅಟ್ಟಹಾಸ, ಕುಹಕ ಯಾವುದೇ ಅತ್ಯಾಚಾರಿಗಿಂತ ಕಡಿಮೆಯೇನಿಲ್ಲ……
ತಾವು ಉತ್ತರವಾಗಿ ಬಳಸಿರುವ ಕಲಹ ಕೌಶಲ ಪದಗಳು, ವೈಯುಕ್ತಿಕ ಮಟ್ಟದ ಆರೋಪಗಳನ್ನು ತುಂಬ ಸಲೀಸಾಗಿ ಉಪಯೋಗಿಸಿದ್ದಿರಾ..
ಇದು ಚರ್ಜೆ ಹುಟ್ಟು ಹಾಕುವವರ ಸ್ಥಿಮಿತ, ಹಾಗು ಲಕ್ಷಣವಂತೂ ಅಲ್ಲ. ಒಬ್ಬರ ತೇಜೋವಧೆಗೆ ಯಾವುದೇ ಮಟ್ಟಕ್ಕೆ ಹೋಗಬಲ್ಲಿರೆಂದು ಕಾಣಿಸುತ್ತದೆ.
ಇನ್ನು ಅಸಮಾನತೆ, ಅತ್ಯಾಚಾರ ಇವುಗೆಳೆಲ್ಲದರ ದುಷ್ಪರಿಣಾಮ ಸಮಾಜದ ಎಲ್ಲರೂ ಅನುಭವಿಸುತ್ತಿರುತ್ತಾರೆ. ರೀತಿ ಬೇರೆಯಿರಬಹುದು. ತನ್ನ ಮಾನಸಿಕ ಕಹಿಯನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ಮಕ್ಕಳ ತಫ್ಫಿನಲ್ಲೂ ಭವಿಶ್ಯದ ಪೀಡಕನಂತೆ ಭಾವಿಸಿಕೊಂಡು ಅವರ ಮೇಲೆ ಎರಗುವ, ಪರಚುವ ನಿಮ್ಮಂತ ಮನೋವಿಕಾರಿ ಮಾನಿನಿಯರನ್ನು ಹುಡುಗರು ಅನುಭವಿಸಿರುತ್ತಾರೆ. ಬಾಲ್ಯದಲ್ಲಿ ಅದು ಉಂಟುಮಾದುವ ಆಘಾತಗಳು ಕಡಿಮೆಯೇನಲ್ಲ.
ಹಾಗೆ ಇಲ್ಲಿ ಬಹಳ ಉರಿ ಬಿದ್ದಿರುವುದು ಸಂಸ್ಕ್ರತಿ ವಿಷಯದಲ್ಲಿ, ದೇಶದ ಪ್ರತಿಯೊಬ್ಬರಿಗೂ ಅದರ ಸಂಸ್ಕ್ರತಿಯನ್ನು ಟೀಕಿಸುವ, ಅಭಿಪ್ರಾಯ ಹೊಂದುವ ಅದಿಕಾರವಿದ್ದೆ ಇದೆ. ನಾವು ನಮ್ಮದಲ್ಲದೇ ಬೇರೆ ದೇಶದ ಸಂಸ್ಕ್ರತಿಯನ್ನು ಟೀಕಿಸಲು ಬರುವುದಿಲ್ಲ. ತಮ್ಮ ಮನೆಯ, ಜನಾಂಗದ ಆಚರಣೆಗಳನ್ನೆ ದೇಶದ ಸಂಸ್ಕ್ರತಿಯನ್ನಾಗಿ ಬಿಂಬಿಸಲು, ಪ್ರಚಾರ ಮಾಡ ಹೊರಟವರಿಗೆ ಹೀಗೆ ಉರಿ ಬೀಳುವುದು ಸಹಜ. ತಮ್ಮ ಲೇಖನದಲ್ಲಿ ಎಲ್ಲಾ ಗಂಡಸರೂ ದುರುದ್ದೇಶದಿಂದಲೇ ನೋಡುತ್ತಿದ್ದರು ಎಂದಿದ್ದೀಯೆ ಹಳದಿಯಾಗಿ ನೋಡುವುದು ಅಭ್ಯಾಸ ಆಗಿಬಿಟ್ಟಿರಬೇಕು. ಚರ್ಚೆ ಹುಟ್ಟುಹಾಕುವವರು ಹೀಗೆಲ್ಲಾ ಬಾಯಿಮಾಡಿ, ನೈಲ್ ಪಾಲಿಷ್ ನ ಪಂಜವನ್ನು ತೋರಿಸಿದರೆ ಬಂದವರು ಆಯ್ತು ಮೇಡಮ್ ಯಾವಗಲೂ ಬ್ರಾಂಡೆಡ್ ಖಾರದಪುಡಿಯನ್ನೆ ಉಪಯೋಗಿಸಿ ಎಂದು ಅಚ್ಚ ಅಚ್ಚ ಹೇಳಿ ಹೋಗಬೇಕಾಗುತ್ತದೆ ಇನ್ನು ಚಿಂತನೆ ಖಾರದಪುಡಿಗಿಂತ ಮುಂದೆ ಎಲ್ಲಿ ಹೋಗುತ್ತದೆ.
            ಇನ್ನು ಚೇತನಾ, ನಾಲಿಗೆ ಇರುವಷ್ಟು ಹರಿಬಿಟ್ಟಿದ್ದೀಯೇ, ಅಪ್ಪಟ ಗಂಡಸ್ತನದ ಬಗ್ಗೆ ಮಾತಾಡಿದ್ದೀ. ಅವಶ್ಯಕತೆಯಿಲ್ಲದಿದ್ದರೂ.
ನಿನ್ನನ್ನು ನೀನು ಗೂಷ್ಲು ಎಂದು ಕರೆದುಕೊಂಡಿರುವುದು ಸರಿ, ಹೀಗೆ ಹೇಳಿಕೊಂಡಿರುವುದು ತಾವು ತಮ್ಮ ಅಪ್ಪಟ ಹೆಣ್ತನದ ಬೇಲಿ ಹಾರಿರುವ ಮತ್ತು ಹಾರುವ ಕುರುಹು ತವಕ ತೋರಿಸುತ್ತದೆ ಅಂತ ನಾನು ಹೇಳಬೇಕಾಗುತ್ತದೆ.
ಇದನ್ನೆಲ್ಲಾ ಓದಿದ ಮೇಲೆ ಚಾಟರ್ ಬಾಕ್ಸ್ ಮತ್ತೆ ಸಿಡಿಯುತ್ತದೆ ಅದರೆ ತಮ್ಮ ಕಲಹ ಚಾತುರ್ಯವನ್ನ ಬೀದಿನಲ್ಲಿ ಮಟ್ಟಕ್ಕೆ ಕೊಂಡು ಹೋಗುವುದಿಲ್ಲ ಎಂದುಕೊಂಡಿದ್ದೇನೆ.
ಮತ್ತೆ ನೋಡಲು ಹೋಗುವುದಿಲ್ಲ, ಏಕೆಂದರೆ ಎಲ್ಲರೂ ಕಿರುಚಾಟರ್ ಬಾಕ್ಸ್ ಗಳಂತೆಯೇ ಕಾಣುವ ಅಪಾಯವಿದೆ.

 

Older comments from Venkatesh and our replys

 

From ಹೀಗೆ ಶುರು ಮಾಡೋಣವೆ?, 2008/04/29 at 6:52 PM
Venkatesh said,
April 3, 2008 @ 06:30 p04 · Edit

ಹುಹ್ ಏನ್ರಿ ಇದು ರೂಲು ದೊಣ್ಣೆ, ಖಾರದ ಪುಡಿ, ಕರಾಟೆ ಎಲ್ಲಾ ಕಲಿಯುವುದು… ಆತ್ಮ ರಕ್ಷಣೆಗಾಗಿ ಇದೆಲ್ಲಾ ಆಗೊ ಹೋಗೊ ಮಾತಾ? ನಮ್ಮದು ಏನು ದರಿದ್ರ ಸಂಸ್ಕ್ರತಿನೋ, ದೇಶಾನೋ? ಇದನ್ನೆಲ್ಲಾ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡವರ ಮನಸ್ಸು ಆರೋಗ್ಯದಿಂದ ಸಮಾಜದ ಕಡೆ ನೋಡುವಂತಾಗಬೇಕಲ್ಲಾ, ಕಣ್ಣಿಗೆ ಕಾಣುವ ಹುಡುಗರೆಲ್ಲಾ , ಗಂಡಸರೆಲ್ಲಾ ಮನುಷ್ಯರಂತೆ ಕಾಣದೆ ರೂಲು ದೊಣ್ಣೆ, ಖಾರದ ಪುಡಿಯಂತೆ ಕಂಡರೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವೇ? ಇಲ್ಲಿ ಸಿಂಧುರವರು ಇದನ್ನೆಲ್ಲಾ ತಿಳಿದು ಓದಿಯೂ ಏನಾದರೂ ಉಪಯುಕ್ತ ಇನಿಶಿಯೇಟಿವ್ ಮಾಡೋಣ ಅಂದಿದ್ದಾರೆ ಹೌದು ಹಾಗೆ ಮಾಡುವುದರ ಮೂಲಕವೇ ಸ್ವಾಸ್ಥ್ಯ ಸಾಧ್ಯ. ಕರಾಟೆಯನ್ನು ಒಂದು ವಿದ್ಯೆ, ಕಲೆ, ಫಿಟ್ ನೆಸ್ ಗಾಗಿ ಕಲಿಯೋದು ಆರೋಗ್ಯಕರವಾದದ್ದು, ಸಣ್ಣ ಹೆಣ್ಣುಮಕ್ಕಳಿಗೆ ನೀನು ಗಂಡು ಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಅಂತ ಕಳಿಸಿದರೆ ಆ ಹುಡುಗಿ ತನ್ನ ಮುಂದಿರುವ ಸಮಾಜದ ಬಗ್ಗೆ ಏನು ಯೋಚಿಸಬೇಕು.
ಒಮ್ಮೆ ತೇಜಸ್ವಿಯವರಿಗೆ ಅವರ ಆರೋಗ್ಯಕರ ಚೇತೋಹಾರಿ ಬರಹದ ಬಗ್ಗೆ ಕೇಳುತ್ತಿದ್ದಾಗ ಅಥವಾ ಅಂಥ ಒಂದು ಸಂಧರ್ಬದಲ್ಲಿ ತೇಜಸ್ವಿಯವರೆಂದರು ಅವರು ವಯಸ್ಕರ ಶಿಕ್ಷಣದ ಪುಸ್ತಕಗಳನ್ನು ನೋಡಿದರಂತೆ ಅದರಲ್ಲಿ ಇದ್ದ ವಿಷಯಗಳು, “ರೇಪ್ ಗೆ ಓಳಗಾದಾಗ ಹೆಣ್ಣು ಏನು ಮಾಡಬೇಕು?” “ಪೋಲಿಸ್ ಕಂಪ್ಲೇಂಟ್, ಕೋರ್ಟ್ ಮೂಲಕ ರಕ್ಷಣೆ, ಇಂತಹ ವಿಷಯಗಳಿದ್ದವಂತೆ, ಸೋ ಅಕ್ಷರಲೋಕಕ್ಕೆ ಕಾಲಿಡುವವರಿಗೆ ಮೊದಲಿಗೆ ಇಂತಹ ಭೀಕರ ಲೋಕದ ಪರಿಚಯದ ಮೂಲಕ ಸ್ವಾಗತ ಮಾಡಹೋದರೆ ಅವರ ಕಲಿಯುವಾಸೆ ಇಂಗಿ ಹೋಗುತ್ತದೆ. ನನಗೆ ತೇಜಸ್ವಿಯವರ ಈ ಹೇಳಿಕೆ ನನಗೆ ಬಹಳ ಮಹತ್ವದೆನಿಸಿತು. ನಾನು ಹಲವು ವರ್ಷಗಳ ಮೊದಲು ನನಗಿರುವಂತೆ ಪುಸ್ತಕ ಓದುವ ಅಭ್ಯಾಸ ನನ್ನ ಅಕ್ಕ, ತಮ್ಮ, ತಂಗಿಯರಿಗೂ ಹತ್ತಿಸಲು ಪ್ರಯತ್ನ ಮಾಡುತ್ತಿದ್ದೆ ಅವರು ಓದಲು ಹಿಂಜರಿಯುತ್ತಿದ್ದರು ಬಹುಶ: ಕಥೆ ಕಾದಂಬರಿಗಳಲ್ಲಿ ಬರುವ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅರಗಿಸಿಕೊಳ್ಳಲು ಒಳಗೆ ಶಕ್ತಿ, ಧೈರ್ಯ, ಬೇಕಾಗುತ್ತದೆ ಅದು ಸುಪ್ತವಾಗಿ ಅವರನ್ನು ತಡೆಯುತ್ತದೆ ಎನಿಸುತ್ತದೆ.
ಅಂತೆಯೇ ಈ ಬ್ಲಾಗ್ [ಅತ್ಯಚಾರದ] ಓದುವಾಗಲು ತಥ್ ಎನಿಸುತ್ತದೆ.

 
Tina said,
April 4, 2008 @ 06:30 p04 · Edit

ಶ್ರೀಯುತ ವೆಂಕಟೇಶ ಅವರೆ,
ನಿಮ್ಮ ಬಗ್ಗೆ ನನಗೆ ಅಯ್ಯೊ ಪಾಪ ಎಂತಲೂ ಅನಿಸುವದಿಲ್ಲ. ಯಾವ ಪ್ರಪಂಚದಲ್ಲಿ ಬದುಕುತ್ತಿದೀರಿ ನೀವು? ರೇಪು, ವಯಸ್ಕರ ಶಿಕ್ಷಣ, ಪೋಲೀಸು ಕಂಪ್ಲೇಂಟು, ಕೋರ್ಟು ಮೂಲಕ ರಕ್ಷಣೆ ಇತ್ಯಾದಿಗಳ ಬಗ್ಗೆ ಓದಿದರೆ ಅಕ್ಷರಲೋಕಕ್ಕೆ ಕಾಲಿಡುವವರು ಹಿಂಜರಿಯುತ್ತಾರೆಯೆ? ಹಾಗಿದ್ದರೆ ಇವತ್ತಿನ ನ್ಯೂಸ್ ಪೇಪರುಗಳು, ಟೀವಿ ಚ್ಯಾನೆಲ್ಲುಗಳು ನಿಮ್ಮ ಸ್ಟಾಂಡರ್ಡಿನ ಪ್ರಕಾರ ತಮ್ಮ ಕಚೇರಿಗಳಿಗೆ ಬೀಗ ಜಡಿದುಕೊಂಡು ಮನೆಗೆ ಹೋಗಬೇಕು. ಯಾಕೆಂದರೆ ನಿಮ್ಮ ಅನಕ್ಷರಕುಕ್ಷಿ ಅಥವ ಹೊಸತಾಗಿ ಅಕ್ಷರಸ್ಥರಾಗಿರುವ ನಿಮ್ಮಂತೆ ಪುಸ್ತಕ ಓದಲು ಹಿಂಜರಿಯುವ ಅಕ್ಕತಂಗಿಯರು ಟೀವಿ ನೋಡಿದರೆ, ನ್ಯೂಸು ಓದಿದರೆ ಮಾನಸಿಕವಾಗಿ ಬಹಳ ತೊಂದರೆ ಪಟ್ಟುಕೊಂಡಾರು ಅಲ್ಲವೆ? ಛೇ ಛೇ! ಅವ್ರಿಗೆ ಏನೂ ನೋಡದೆ ಅಡುಗೆಮನೆಯಲ್ಲಿ ತೆಪ್ಪಗೆ ಬೇಯಿಸಿ ಬಡಿಸಲು ತಾಕೀತುಮಾಡಿ. ನಿಮ್ಮ ಮನೆಯ ಹೆಣ್ಣುಮಕ್ಕಳು ಪ್ರಪಂಚದ ಯಾವ ತೊಂದರೆಯೂ ಇಲ್ಲದ ಹಾಗೆ ಅಲ್ಲಿ ಸೇಫಾಗಿರುತ್ತಾರೆ. ಇನ್ನು ನಮ್ಮ ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ ನಿಮಗಿರೋ ಐಡಿಯದ ಬಗ್ಗೆ ನನಗೆ ಚೆನ್ನಾಗಿ ಅರಿವಾಗಿದೆ. ಕರಾಟೆ ಆರೋಗ್ಯವರ್ಧನೆಗಾಗಿ ಫಿಟ್ನೆಸ್ಸಿಗಾಗಿ ಕಲಿಯುವ ವಿದ್ಯೆಯಲ್ಲ ಮಹಾಸ್ವಾಮೀ, ಅದು ಆತ್ಮರಕ್ಷಣೆಗಾಗಿಯೇ ಇರುವ ವಿದ್ಯೆ. ನಿಮ್ಮ ಜನರಲ್ ನಾಲೆಡ್ಜಿಗೆ ನನ್ನ ನಮಃಸ್ಕಾರ! ರೂಲುದೊಣ್ಣೆ ಖಾರದಪುಡಿಗಳೆಲ್ಲ ಗಂಡಸರಾಗಿ ಕಾಣುವದಿಲ್ಲ ಸ್ವಾಮೀ, ಅದು ಕೇವಲ ಹೆಂಗಸರನ್ನು ಹೆಂಗಸರಂತೆ ಕಾಣದೆ ತಮ್ಮ ಖಯಾಲಿ ಪೂರಯಿಸಿಕೊಳ್ಳಲು ಮಾಧ್ಯಮದಂತೆ ಕಾಣುವ ನರಾಧಮರ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಯೋಗಿಸಲು ಮಾತ್ರ. ಹೌದು, ನಿಮಗೇಕೆ ಇಷ್ಟೊಂದು ಹಿಂಸೆ ಅನ್ನಿಸುತ್ತಿದೆ? ನಾವು ನಿಮ್ಮ ವಿಷಯಾನ ಇಲ್ಲಿ ಚರ್ಚಿಸ್ತಾ ಇಲ್ಲ! ಕಣ್ಣುಬಿಟ್ಟು ಈ ಬರಹವನ್ನ ಮೊದಲು ಓದಿ. ಸಣ್ಣ ಹೆಣ್ಣುಮಕ್ಕಳಿಗೆ ಗಂಡುಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಎಂದು ಕಲಿಸಲಾಗುವುದಿಲ್ಲ, ತಮ್ಮನ್ನು ಸಾವಿರಾರು ವರುಷಗಳಿಂದ ’ನೀನು ಅಬಲೆ’ ಅಂತ ತಲೆಗೆ ತುಂಬಿಸುತ್ತ ಬಂದಿದೆಯಲ್ಲ ನಮ್ಮ ಪ್ರಜ್ನೆ? ಅದನ್ನ ತೆಗೆದುಹಾಕಿ ’ನೀನು ಸಬಲೆ, ಯಾರಿಗೂ ಕಡಿಮೆಯಿಲ್ಲ’ ಅನ್ನುವ ಧೈರ್ಯವನ್ನ ತುಂಬುವ ಕೆಲಸ ಇದು. ನಿಮ್ಮ ಯೋಚನೆಗೆ ಬಹುಶಃ ನಿಲುಕಲಿಕ್ಕಿಲ್ಲ ಬಿಡಿ ಸಾರ್. ಮತ್ತೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ. ಅವ್ರ ಸುಪ್ತಪ್ರಜ್ನೆಯ ಬಗ್ಗೆ ಕೂಡ ನೀವು ಆಳ ಅಧ್ಯಯನ ನಡೆಸಿ ಅವ್ರು ಪುಕ್ಕಲುಗಳು ಅಂತ ಡಿಸೈಡು ಮಾಡಿಯಾಗಿದೆ. ಇನ್ನೇನು ಹೇಳಲಿ? ಪಾಪ ಟೀವಿ ಸೀರಿಯಲ್ಲುಗಳನ್ನು ನೋಡಿಯೂ ಗಡಗಡ ನಡುಗುತ್ತಿರುತ್ತಾರೇನೊ ಅವರು?
ನಮ್ಮಲ್ಲಿ ಪುರುಷದ್ವೇಷವಿಲ್ಲ ಎಂದು ನಾವು ನಿಮಗೇಕೆ ಸಮಜಾಯಿಶಿ ಕೊಡಲಿ?

ನನಗೆ ನಿಮ್ಮ ಥರದವರ ಬಗ್ಗೆ, ನೀವುಗಳು ಹೀಗೆಲ್ಲ ತೇಜಸ್ವಿ, ಸಂಸ್ಕೃತಿ ಅಂತೆಲ್ಲ ಮಾತನಾಡುತ್ತ ನಡೆಸುವ ಮಾನಸಿಕ ಅತ್ಯಾಚಾರದ ಬಗ್ಗೆ ’ಅಸಹ್ಯ’ ಅನ್ನಿಸತ್ತೆ.
chetana chaitanya said,
April 5, 2008 @ 06:30 p04 · Edit

ನಮಸ್ತೇ ವೆಂಕಟೇಶ್,

ನಾಚಿಕೆಯಾಗ್ಬೇಕು ನಿಮಗೆ. ದಿನದಿನವೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ಲೈಂಗಿಕ ಅತ್ಯಾಚಾರಗಳ ಬಗ್ಗೆ ತಿಳಿದಿದ್ದೂ ( ತಿಳಿಯದಿದ್ದರೆ ಅಯ್ಯೋ ಪಾಪ!) ಹೀಗೆಲ್ಲ ಕಮೆಂಟು ಮಾಡಿರುವುದು ನಿಮ್ಮ ‘ಲೆವೆಲ್’ ಅನ್ನು ಸೂಚಿಸುತ್ತದೆ. ನಮ್ಮದು ಏನು ದರಿದ್ರ ಸಂಸ್ಕೃತೀನೋ, ದೇಶಾನೋ ಅಂತ ಹೇಳಿರುವ ನಿಮ್ಮ ದರಿದ್ರ ಮನಸ್ಥಿತಿಗೆ ನನ್ನ ಧಿಕ್ಕಾರ. ನಿಮ್ಮಂಥವರು ಮಾಡೋದೆಲ್ಲವನ್ನೂ ಸಹಿಸ್ಕೊಳ್ಳುತ್ತ ಬಿದ್ದಿರಬೇಕು,
ಸಣ್ನದೊಂದು ಪ್ರತಿಭಟನೆಯನ್ನೂ ತೋರಬಾರದು ಅನ್ನುವ ನಿಮ್ಮ ದಬ್ಬಾಳಿಕೆಯ ಮನೋಭಾವ ನಿಜಕ್ಕೂ ಅನುಕಂಪ ತರಿಸ್ತಿದೆ.
ಅಥವಾ ನೀವ್ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದೀರಿ? ಅನ್ನೋ ಅನುಮಾನವೂ ಮೂಡ್ತಿದೆ.
ಬಿಟ್ಬಿಡಿ. ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಾವು ಪುರುಷ ದ್ವೇಷಿಗಳಲ್ಲ. ಇದೇ ಬರಹಕ್ಕೆ ಪ್ರತಿಕ್ರಿಯಿಸಿರುವ ಸಹೃದಯೀ ಗಂಡಸರನ್ನು ನೋಡಿ ನಾಚಿಕೊಳ್ಳಿ.
ನಮ್ಮೆಲ್ಲ ಪ್ರಯತ್ನಕ್ಕೂ ಜೊತೆಯಾಗಬಲ್ಲ ಅಂಥವರು ‘ಅಪ್ಪಟ ಗಂಡಸರು’
ನಿಮ್ಮ ಬಗ್ಗೆ ಏನನ್ನಬೆಕೋ ತಿಳೀತಿಲ್ಲ.
ಸಧ್ಯಕ್ಕೆ, ‘ಅಸಹ್ಯ’ ಅನ್ನಿಸುತ್ತಿದೆ ಅಷ್ಟೇ.

ವಂದೇ,
ಚೇತನಾ ತೀರ್ಥಹಳ್ಳಿ
Venkatesh said,
April 7, 2008 @ 06:30 p04 · Edit

ಟೀನಾ ಜಿ,
ಅಕ್ಷರ ಕಲಿಯುವುದು ಬೇರೆ, ಪುಸ್ತಕ ಓದುವ ಹವ್ಯಾಸ ಬೇರೆ ಕೆಲವರಿಗೆ ಒಗ್ಗುತ್ತದೆ, ಕೆಲವರಿಗೆ ಒಗ್ಗುವುದಿಲ್ಲ.
ಇದನ್ನು ಈ ಸಂದರ್ಭದಲ್ಲಿ ಹೆಳಿದೆನೆ ಹೊರತು ಜೆನೆರಲೈಸ್ ಮಾಡಿಲ್ಲ. ಆದರೆ ನೀವು ಜನರಲೈಸ್ ಮಾಡಿಕೊಂಡಿದ್ದೀರ.
ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.
ನಿಮ್ಮ ಬರಹವೇನು ಅಪ್ರಸ್ತುತ ಎಂದೇನೂ ನಾನು ಹೇಳಿಲ್ಲ.
ಮಹಿಳೆಯರ ಪ್ರಚೋದಕ ರೀತಿ, ನೀತಿ,ಉಡುಗೆಗಳೇ ಕಾರಣ ಎಂದೇನಾದರೂ ಹೇಳಿದ್ದರೆ ನೀವು ಹೀಗೆ ಹಾರಾಡಬಹುದಿತ್ತು, ಆದ್ದರಿಂದ ಮಾನಸಿಕ ಪ್ರಬುದ್ದತೆಯ ಸರ್ಟಿಫಿಕೇಟನ್ನು ಯಾರಿಗೆ ಅನ್ವಯಿಸುತ್ತದೋ ನೋಡಿಕೊಳ್ಳೀ.
Tina said,
April 8, 2008 @ 06:30 p04 · Edit

ವೆಂಕಟೇಶ್,
ಯಾಕೊ ನಿಮ್ಮ ಮೂಡೇ ಬದಲಾದಹಾಗಿದೆ ಈ ಸಾರಿ! ನಾನು ಜನರಲೈಸ್ ಮಾಡುವ ಪೇಟೆಂಟನ್ನ ನೀವು ತೆಗೆದುಕೊಂಡುಬಿಟ್ಟಿದೀರಿ ಅಂದುಕೊಂಡಿದ್ದೆ, ಸದ್ಯ ಇನ್ನೂ ಆ ವಿಭಾಗ ಫ್ರೀಯಾಗಿ ಉಳಿದುಕೊಂಡಿದೆ ಎಂದು ತಿಳಿದು ಸಮಾಧಾನವಾಗಿದೆ. ನಿಮ್ಮ ಪದಗಳಿಗೆ ನನ್ನ ಪ್ರತಿಕ್ರಿಯೆಯನ್ನ ಓದಿದೀರಿ ತಾನೆ? ಅದರ ಹಿಂದೆಯೆ ನಿಮ್ಮ ಕಮೆಂಟು ಕೂಡ ಇತ್ತಲ್ಲ, ಅದನ್ನ ಇನ್ನೊಂದು ಸಲ ನೀವೇ ಸರಿಯಾಗಿ ಓದಿದ್ದರೆ ಚೆನ್ನಾಗಿತ್ತು. ಬರೆಯೋದು ಬರೆದುಬಿಟ್ಟು ’ನೀವು ಜನರಲೈಸ್ ಮಾಡಿದೀರ’ ಅಂತ ನುಣುಚಿಕೊಳ್ಳೋ ಹಿಪಾಕ್ರಸಿ ನನಗೆ ಹೊಸತೇನಲ್ಲ. ಸ್ವಾಮಿ, ನನ್ನ ಮಾನಸಿಕ ಪ್ರಬುದ್ಢತೆಯ ಬಗ್ಗೆ ನನಗೆ ಖಾತ್ರಿ ಇದೆ, ಅದ್ರ ಬಗ್ಗೆ ತಾವು ಬರೆದು ಬೆರಳು ನೋಯಿಸಿಕೊಳ್ಳುವ ತೊಂದರೆ ತೆಗೆದುಕೊಳ್ಳದಿದ್ದರೇನೆ ಒಳಿತು. “ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.” ಅಂದಿದೀರಿ, ಅಂಥಾ ಕಾಳಜಿ ನಿಮ್ಮ ಹಿಂದಿನ ಕಮೆಂಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲವಲ್ಲ!! ನಾನು ಯಾವ ವಿಷಯದ ಬಗ್ಗೆ ಹಾರಾಡಬಹುದು ಎಂದು ಕೂಡ ನೀವು ಊಹಿಸಿಬಿಟ್ಟಿದೀರ. ವಾಹವಾ! ನಾನು ಈ ರೀತಿ ತಮ್ಮ ಸಮಯ ವ್ಯಯ ಮಾಡಿದ್ದಕ್ಕೆ ವಿಪ್ರೀತ ಗಿಲ್ಟೀ ಫೀಲಿಂಗು ಸಾರ್! ಪುನಃ ತಮ್ಮ ಕೈ ಬಾಯಿ ನೋಯಿಸಿಕೊಳ್ಳುವ ಗೋಜಿಗೆ ಹೋಗಬೇಡಿರಿ. ಧನ್ಯವಾದ.

Ganesh K said,
April 11, 2008 @ 06:30 p04 · Edit

ಸೀರೆ ಉಟ್ಟುಕೊಂಡವರ ಮೇಲೆ ಅತ್ಯಾಚಾರಗಳಾಗುವುದಿಲ್ಲ. ಸೆಕ್ಸಿಯಾದ figure hugging, skimpy ಬಟ್ಟೆ ಹಾಕಿಕೊಂಡವರ, ಜೀನ್ಸ್, ಟೀ ಶರ್ಟ್ ಹಾಕಿಕೊಂಡವರ ಮೇಲೆ ರೇಪ್ ಆಗೋ ಚಾನ್ಸ್ ಇರ್ತವೆ ಅನ್ನೋ ಮಾತು ಕೇವಲ ವಿವೇಚನಾರಹಿತವಾದದ್ದು, ಬಾಲಿಶವಾದದ್ದು ಹಾಗೂ ಪಜ್ಞಾ ಶೂನ್ಯವಾದದ್ದು ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡ್ ಅಂದರೆ ಬೇರೆಯವರಿಗೆ ಮುಜುಗರ ಆಗದ ರೀತಿಯಲ್ಲಿ, ಪ್ರಚೋದಕ ಅನ್ನಿಸದ ರೀತಿಯಲ್ಲಿ ಇರಬೇಕೆಂಬ ಸದಾಶಯ ತಪ್ಪಲ್ಲವೆಂದು ಭಾವಿಸುವೆ. ವೆಂಕಟೇಶರ ಮೊದಲ ಪ್ರತಿಕ್ರಿಯೆಯೇ ಒಂದು ದಿಕ್ಕಿನಲ್ಲಿದ್ದರೆ ನಂತರದ್ದು ಇನ್ನೊಂದು ದಿಕ್ಕಿನಲ್ಲಿದೆ. ಎರಡರ ನಡುವೆ ಸಾಮ್ಯತೆ ಇಲ್ಲ. ಅವರು ಸಮರ್ಥನೆಯ ಆಸೆ ಕೈಬಿಡುವುದು ಉತ್ತಮ.

ಬೆಂಗಳೂರಿನಲ್ಲಿ ಐ.ಟಿ. ಸಾಫ್ಟ್ವ್ ವೇರ್ ಎಂಜಿನಿಯರುಗಳ ಮೇಲೆ ದಿನವೂ ನೆಡೆಯುವ ಹಲ್ಲೆಗಳನ್ನ ನೋಡಿದರೆ(ನಾನಿಲ್ಲಿ ಹೇಳುತ್ತಿರುವುದು ಪುರುಷರ ಬಗ್ಗೆ) ಸ್ತ್ರೀಯರು ತಮ್ಮ ಆತ್ಮರಕ್ಷಣೆಗೆ ತಕ್ಕುದಾದ ತಯ್ಯಾರಿ ಮಾಡಿಕೊಳ್ಳುವುದು ಉತ್ತಮ. ವೆಂಕಟೇಶರಿಗೆ ಉತ್ತರಿಸುವಾಗ, ಸ್ತ್ರೀಯರು ಮಾಡಿಕೊಳ್ಳಬೇಕಾದ ತಯ್ಯಾರಿಗಳ ಬಗ್ಗೆ ಸ್ತ್ರೀಯರು ಚರ್ಚಿಸಿದರೆ, ಪುರುಷರೇಕೆ ಪುರುಸೊತ್ತು ಮಾಡಿಕೊಂಡು ಬಂದು ಅಡಸಾ ಬಡಸಾ ಕಾಮೆಂಟ್ ಹಾಕೋದು ಅನ್ನೋದನ್ನ ನೇರವಾಗೇ, ಖಡಕ್ಕಾಗಿ ಹೇಳಿದ್ದರೆ ಚೆನ್ನಾಗಿರ್ತಿತ್ತು ಟೀನಾ.

ಟೀನಾ ಒಂದು ಉತ್ತಮ ಚರ್ಚೆಯನ್ನ ಹುಟ್ಟುಹಾಕಿದ್ದಾರೆ. ಅವರಿಗೆ ಧನ್ಯವಾದಗಳು.
ಗಣೇಶ್.ಕೆ

Comments (19)