ಸಂವಾದ.ಕಾಂ ನ ಗೆಳೆಯರ ಬಗ್ಗೆ ನಾನು ನಿಮಗೆ ತಿಳಿಸಿಲ್ಲ ಅಲ್ವಾ? ಬ್ಲಾಗರ್ ಅರೇಹಳ್ಳಿರವಿಯವರ ಮುಖಾಂತರ ನನಗೆ ಪರಿಚಯವಾದ ಬಳಗ ಇದು. ಯಾವುದೇ ಆಡಂಬರವಿಲ್ಲದೆ, ಹೆಚ್ಚಿಗೆ ಗಲಾಟೆ ಮಾಡದೆ ಅಚ್ಚುಕಟ್ಟಾಗಿ ಕನ್ನಡಸಾಹಿತ್ಯ, ಸಂಸ್ಕೃತಿಯನ್ನ ತನ್ನದೇ ವಿಶಿಷ್ಟ ರೀತಿಯಲ್ಲಿ ಬದಲಾಗುತ್ತಿರುವ ಕಾಲದೊಂದಿಗೆ ಹೆಜ್ಜೆಹಾಕುತ್ತ ಕಾಣಲೆಳಸುತ್ತಿರುವ ಆಸಕ್ತರ ಗುಂಪು ಇದು. ಇಲ್ಲಿ ಹಿರಿಕಿರಿಯರನೇಕರಿದ್ದಾರೆ..ಕರ್ನಾಟಕದೆಲ್ಲೆಡೆಯಿಂದ. ಆಗಾಗ ಭೇಟಿಯಾಗಿ, ಕಾರ್ಯಕ್ರಮಗಳನ್ನು ಆಯೋಜಿಸಿ ಚೆಂದವಾಗಿ ನಡೆಸಿಯೂಬಿಡುತ್ತಾರೆ. ಈ ಶನಿವಾರ -ಭಾನುವಾರ ಅಂದರೆ ೨೨ ಹಾಗೂ ೨೩ ನವೆಂಬರ್ ತುಮಕೂರು ಬಳಿಯ ಐತಿಹಾಸಿಕ ತಾಣವಾದ ದೇವರಾಯನದುರ್ಗದಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ ಸಿನಿಮಾ ರಸಗ್ರಹಣ ಶಿಬಿರವೊಂದನ್ನು ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಬನ್ನಿ, ಭಾಗವಹಿಸಿ, ಪ್ರೋತ್ಸಾಹ ನೀಡಿ.
ಏನು? ಪ್ಲಾನ್ ಮಾಡಿಕೊಂಡಿಲ್ಲವಲ್ಲ ಅಂದುಕೊಳ್ಳುತ್ತ ಇದೀರ. ಪ್ಲಾನ್ ಮಾಡದೆ ಹೊರಟುನೋಡಿ, ಚನಾಗಿರತ್ತೆ. ದೇವರಾಯನದುರ್ಗ ಬೆಂಗಳೂರಿಂದ ಏನು ಮಹಾ ದೂರ ಏನಿಲ್ಲ. ನಾನು ಕೊಟ್ಟಿರುವ ಲಿಂಕಿನಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿ ಇದೆ. ಬಂದರೆ ಶನಿವಾರ ನಾನೂ ಇರ್ತೇನೆ.
chatter box
congrats on winning the review award
may god bless u
amen!
-g n mohan
Dear sir
Please visit my blog
http://rishyashringa.blogspot.com/
ನಮಸ್ಕಾರ ಮೇಡಂ
ನಾನು ನಿಮ್ಮ ಬ್ಲಾಗ್ ಓದುಗ. ನಾನೊಂದು ಬ್ಲಾಗ್ ತೆರೆದಿದ್ದೇನೆ. ದಯವಿಟ್ಟು ಓದಿ, ಹರಸಿ.
ನಿಮ್ಮ ಕಾಲ್ಗುಣದಿಂದ ನನ್ನ ಮನೆಗೆ ಮಂಗಳವಾಗಲಿ.
-ರಿಶಿ
risyashringaa@gmail.com
rishyashringa.blogspot.com
ಟೀನಾ ನಂದೂ ಒಂದು ಕಂಗ್ರಾಟ್ಸ್ ಇಸ್ಕೊಳ್ಳಿ!
(ಆದ್ರೆ ದೇವ್ರಾಣೆಗೂ ನಿಮಗೆ ಏನ್ ಅವಾರ್ಡ್ ಬಂತು ಅಂತ ಗೊತ್ತಾಗಿಲ್ಲ ನಂಗೆ ಪ್ಲೀಸ್ ತಿಳಿಸಿ)
congratularions.
teena, many awards may come to you,
but we are awarded for getting you.